ದಾವಣಗೆರೆ: 22ನೇ ವಾರ್ಡ್ನ ಯಲ್ಲಮ್ಮ ನಗರದ ವ್ಯಾಪ್ತಿಯ 3ನೇ ಮೇನ್ 13ನೇ ಕ್ರಾಸ್ನಲ್ಲಿ ಮೇಯರ್ ಬಿ.ಜಿ.ಅಜಯ್ಕುಮಾರ್ ಅವರು ಶನಿವಾರ ಚರಂಡಿಯನ್ನು ಸ್ವಚ್ಛಗೊಳಿಸಿದರು.
ಇಲ್ಲಿನ ಸಿದ್ಧಿ ವಿನಾಯಕ ಪ್ರಾಥಮಿಕ ಶಾಲೆಯಲ್ಲಿ ‘ಮನೆಯ ಬಾಗಿಲಿಗೆ ಮಹಾನಗರ ಪಾಲಿಕೆ’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಪರಿಶೀಲನೆಗೆ ಬಂದಿದ್ದ ವೇಳೆಹಲವು ವರ್ಷಗಳಿಂದ ಸ್ವಚ್ಛವಾಗದೇ ಇದ್ದ ಚರಂಡಿಯನ್ನು ಗಮನಿಸಿದ್ದರು.
ಈ ವೇಳೆ ಪೌರಕಾರ್ಮಿಕರು ಸ್ವಚ್ಛ ಮಾಡುತ್ತಿದ್ದ ಸ್ಥಳಕ್ಕೆ ಹೋಗಿರಸ್ತೆ ಬದಿ ಕಾರು ನಿಲ್ಲಿಸಿ ಅವರ ಕೈಯಿಂದ ಗುದ್ದಲಿ ಪಡೆದು ಚರಂಡಿ ಸ್ವಚ್ಛಗೊಳಿಸುವ ಮೂಲಕ ಅವರನ್ನು ಪ್ರೋತ್ಸಾಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.