ದಾವಣಗೆರೆ: ತಾಲ್ಲೂಕಿನ ಚಿಕ್ಕ ತೊಗಲೇರಿಯಲ್ಲಿ ಭಾನುವಾರ ಆಕಸ್ಮಿಕವಾಗಿ ಬೆಂಕಿ ತಗುಲಿ ಎರಡು ಮೇಕೆಗಳು ಸಜೀವ ದಹನವಾಗಿವೆ. ಶೆಡ್ ಮತ್ತು ಟಿ ಅಂಗಡಿಗೆ ಹಾನಿಯಾಗಿದೆ.
ಚಿಕ್ಕತೊಗಲೇರಿಯ ನಾಗೇಂದ್ರಪ್ಪ ಅವರು ಶೆಡ್ ಮಾಡಿಕೊಂಡು ಅದರಲ್ಲಿ ಮೇಕೆಗಳನ್ನು ಕಟ್ಟಿದ್ದರು. ಜತೆಗೆ ಪಕ್ಕದಲ್ಲಿ ಟಿ ಅಂಗಡಿ ಕೂಡ ನಡೆಸುತ್ತಿದ್ದರು. ಭಾನುವಾರ ಅವರು ಜಮೀನಿಗೆ ತೆರಳಿದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದ್ದರಿಂದ ಅವಘಡ ಉಂಟಾಗಿದೆ. ಸ್ಥಳೀಯರು ಮತ್ತು ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ. ನಾಗೇಂದ್ರಪ್ಪ ಅವರಿಗೆ ತಾಲ್ಲೂಕು ಆಡಳಿತ ಪರಿಹಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.