ADVERTISEMENT

ನೀಲಕಂಠ ಜ್ಯುವೆಲ್ಲರ್ಸ್‌ನಿಂದ ಆಭರಣ ಮೇಳ 26ರವರೆಗೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 2:51 IST
Last Updated 24 ಜೂನ್ 2022, 2:51 IST

ದಾವಣಗೆರೆ: ನೀಲಕಂಠ ಜ್ಯುವೆಲ್ಲರ್ಸ್‌ನಿಂದ ‘ಸುವರ್ಣ ಸಮೃದ್ಧಿ’ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳ ಜೂನ್‌ 24ರಿಂದ 26ರವರೆಗೆ ಇಲ್ಲಿನ ಶಾಮನೂರು ರಸ್ತೆಯ ದಿ ಸದರ್ನ್‌ ಸ್ಟಾರ್ ಹೋಟೆಲ್‌ನಲ್ಲಿ ಆಯೋಜಿಸಲಾಗಿದೆ ಎಂದುನೀಲಕಂಠ ಜ್ಯುವೆಲ್ಲರ್ಸ್‌ ಬೆಂಗಳೂರು ಶಾಖಾ ವ್ಯವಸ್ಥಾಪಕ ರಮೇಶ್‌ಬಾಬು ಹೇಳಿದರು.

ಮೇಳವನ್ನು ಜೂನ್‌ 24ರಂದು ಬೆಳಿಗ್ಗೆ 11ಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟಿಸುವರು. ಉದ್ಯಮಿ ಎಸ್‌.ಎಸ್‌. ಗಣೇಶ್‌, ರೇಖಾ ಗಣೇಶ್‌, ನೀಲಕಂಠ ಜ್ಯುವೆಲ್ಲರ್ಸ್‌ನ ಸಿಇಒ ಗುರುಮುಖ್‌ ಸಿಂಗ್‌ ಭಾಗವಹಿಸುವರು. ನೀಲಕಂಠ ಜ್ಯುವೆಲ್ಲರ್ಸ್‌ ಬೆಂಗಳೂರು, ಚೆನ್ನೈ, ಹೈದರಾಬಾದ್‌ನಲ್ಲಿ ಮಳಿಗೆ ಹೊಂದಿದೆ. ದಾವಣಗೆರೆಯ ಜನರು ಬೆಂಗಳೂರಿಗೆ ಬಂದು ಆಭರಣ ಖರೀದಿಸುತ್ತಿದ್ದರು. ಜನರ ಬೇಡಿಕೆ ಮೇರೆಗೆ ಇಲ್ಲಿ ಪ್ರದರ್ಶನ ಆಯೋಜಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಗ್ರಾಹಕರಿಗೆ ಅತ್ಯುತ್ತಮ ವಿನ್ಯಾಸದ, ವಿಶಿಷ್ಟವಾದ, ಅತ್ಯಾಧುನಿಕ, ಜನಪ್ರಿಯ ಶೈಲಿಯ ಆಭರಣಗಳು ಪ್ರದರ್ಶನದಲ್ಲಿ ಇರಲಿವೆ. ಅತ್ಯುನ್ನತ ದರ್ಜೆಯ ಚಿನ್ನ, ವಜ್ರದ ಕಲಾತ್ಮಕ ಆಭರಣಗಳು, ಆಂಟಿಕ್‌, ಪ್ಯಾಟಿನಂ, ಸ್ಟೋನ್‌ ಆಭರಣ ಸೇರಿ ವೈವಿಧ್ಯಮಯ ಆಭರಣಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಗ್ರಾಹಕರು ಪ್ರದರ್ಶನದ ಸದುಪಯೋಗ ಪಡೆಯಬೇಕು ಎಂದು ಅವರು ಮನವಿ ಮಾಡಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಇವೆಂಟ್‌ ಮ್ಯಾನೇಜ್‌ಮೆಂಟ್‌ನ ಚೇತನ್‌, ಕಾರ್ತಿಕ್, ನವೀನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.