ದಾವಣಗೆರೆ: ಶ್ರೀರಾಮ ಮಂದಿರ ನಿರ್ಮಾಣಕ್ಕೆ ಜನವರಿ 15ರಿಂದ ಫೆಬ್ರುವರಿ 5ರವರೆಗೆ ನಡೆಯುವ ನಿಧಿ ಸಮರ್ಪಣಾ ಅಭಿಯಾನದ ಪ್ರಯುಕ್ತ ಶುಕ್ರವಾರ ಸಂತರ ಸಮಾವೇಶ ನಡೆಯಿತು.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ, ‘ನಿಧಿ ಸಮರ್ಪಣಾ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ಸಲಹೆ ನೀಡಿದರು.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಕರ್ನಾಟಕದ ರಾಜ್ಯ ಸಹಾ ಪ್ರಮುಖ್ ಬಸವರಾಜ್ ಮಾತನಾಡಿ, ‘ರಾಮ ಮಂದಿರಕ್ಕೆ ಬೇಕಾದ ಹಣವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಪಡೆಯದೇ ಭಕ್ತರಿಂದ ಪಡೆಯಲು ರಾಮ ಜನ್ಮ ಭೂಮಿಯ ತೀರ್ಥ ಕ್ಷೇತ್ರ ಟ್ರಸ್ಟ್ ತೀರ್ಮಾನಿಸಿದೆ. ಜನವರಿ 15ರಿಂದ ಆರಂಭವಾಗುವ ಅಭಿಯಾನಕ್ಕೆ ಕೈಜೋಡಿಸಬೇಕು’ ಎಂದು ಸ್ವಾಮೀಜಿಗಳಲ್ಲಿ ಮನವಿ ಮಾಡಿದರು.
ಯರಗುಂಟೆಯ ಪರಮೇಶ್ವರ ಸ್ವಾಮೀಜಿ ಮೊದಲನೆಯದಾಗಿ ದೇಣಿಗೆ ಸಮರ್ಪಿಸಿದರು. ಚನ್ನಗಿರಿಯಹಿರೇಮಠದ ಶಾಖಾಮಠದ ಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಮುಷ್ಟೂರು ಓಂಕಾರೇಶ್ವರ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಹರಿಹರದ ರಾಮಕೃಷ್ಣ ಆಶ್ರಮದ ಶಾರದಾನಂದ ಸ್ವಾಮೀಜಿ, ಯರಗುಂಟೆಯ ಸಾಧ್ವಿ ಅಮ್ಮ ಮಾತಾಜಿ ಸುರೇಖಮ್ಮ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಮಧು, ವಿನಾಯಕ ರಾನಡೆ, ಅರುಣ ಗುಡ್ಡದಕೆರೆ, ವಿಶ್ವ ಹಿಂದೂ ಪರಿಷತ್ನ ಮಂಜಣ್ಣ, ಸಿ.ಎಸ್. ರಾಜು, ಮಂಜುನಾಥ್, ಕೃಷ್ಣಮೂರ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.