ದಾವಣಗೆರೆ: ಸಮೀಪದ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ಗಂಗಾಮತಸ್ಥರು ಮಂಗಳವಾರ ಗಂಗಾ ಜಯಂತಿಯನ್ನು ಸರಳವಾಗಿ ಆಚರಿಸಿದರು.
ಚೆನ್ನಾಗಿ ಮಳೆಯಾಗಿ ಬೆಳೆ ಸಮೃದ್ಧವಾಗಿ ಬರಲೆಂದು ಗಂಗಾದೇವಿಯನ್ನು ಪೂಜಿಸಲಾಯಿತು. ಜಿಲ್ಲಾ ಗಂಗಾಮತಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಉಮೇಶ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು.
ಸಮಾಜದ ಕೆ.ರಾಮಣ್ಣ, ಜೆ. ಮೋಹನ್ಕುಮಾರ್, ಕೆ.ಎಂ. ಮಂಜುನಾಥ್, ಕೆ.ಎಂ. ಹನುಮಂತಪ್ಪ, ರಮೇಶ ಚಂದ್ರಬಾಬು, ಕೆ.ಲಕ್ಷ್ಮಣ, ಸರಿತಾ, ಸವಿತಾ, ಸುಷ್ಮಾ, ಪುಷ್ಪ, ವಾಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.