ಹಿರಿಯೂರು: ನಗರದ ಸಿಎಂ ಬಡಾವಣೆಯಲ್ಲಿರುವ ಐಟಿಐ ಕಾಲೇಜು ಸಮೀಪ ನೂತನವಾಗಿ ನಿರ್ಮಿಸಿರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯದ ಲೋಕಾರ್ಪಣೆ ಸಮಾರಂಭ ನ. 1ರಿಂದ 3ರವರೆಗೆ ನಡೆಯಲಿದೆ.
ನ. 1ರಂದು ಭಗವದ್ ಭಾಗವತಾಚಾರ್ಯ ಪ್ರಾರ್ಥನೆ, ಅನುಜ್ಞೆ, ಸ್ವಸ್ತಿವಾಚನ, ತೀರ್ಥ ಸಂಗ್ರಹಣೆ (ಗೋಪೂಜೆ), ಯಾಗಶಾಲಾ ಪ್ರವೇಶ, ವಿಶ್ವಕ್ಷೇನೆ, ಆರಾಧನೆ, ಭಗವದ್ ವಾಸುದೇವ ಪುಣ್ಯಾಹ, ಪ್ರತಿಸರ ಬಂಧನ, ಋತ್ವಿಕಾವರಣ, ಮೃತ್ಸಂಗ್ರಹಣ, ಅಂಕುರಾರ್ಪಣೆ, ಅನಿರ್ವಾಣ, ಮಹಾಸಂಕಲ್ಪ, ದೀಪಾರಾಧನೆ, ಮಹಾಗಣಪತಿ ಹೋಮ, ಲಘುಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ.
ನ. 2ರಂದು ಬೆಳಿಗ್ಗೆ 5.30ಕ್ಕೆ ಸೋತ್ರ ಪಾರಾಯಣ, ದ್ವಾರತೋರಣ, ಧ್ವಜ ಕುಂಭಾರಾಧನೆ, ಸುಪ್ರಭಾತ, ಮಹಾ ಗಣಪತಿ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ತೀರ್ಥ, ಪ್ರಸಾದ ವಿನಿಯೋಗ ನಡೆಯುತ್ತದೆ.
ನ. 3ರಂದು ಬೆಳಿಗ್ಗೆ ಸುಪ್ರಭಾತ, ಭಗವತ್ ಪ್ರಾರ್ಥನೆ, ಬಿಂಬ ಪ್ರತಿಷ್ಠಾಂಗ ಅನುಜ್ಞೆ, ಪೀಠಾರ್ಚನೆ, ಬಿಂಬ ಪ್ರತಿಷ್ಠೆ ಸೂತ್ರ ಬಂಧನ, ಪ್ರಧಾನಾದಿ ಪರಿವಾರ ಹೋಮಗಳು, ಪ್ರಾಣ ಪ್ರತಿಷ್ಠೆ, ಷೋಡಶನ್ಯಾಸ ಹೋಮ, ಶಾಂತಿ ಹೋಮ, ಪ್ರಾಯಶ್ಚಿತ್ತ ಹೋಮ ನಡೆಯಲಿದೆ.
ಪಂಚಮುಖಿ ಆಂಜನೇಯ ಸ್ವಾಮಿ ಸ್ಥಿರ ಬಿಂಬ ಪ್ರತಿಷ್ಠಾಪನೆ ಹಾಗೂ ಜ್ಞಾನ ವಿಮಾನ ಗೋಪುರ ಕಳಸ ಪ್ರತಿಷ್ಠಾಪನೆ ನಡೆಯಲಿದೆ ಎಂದು ದೇವಸ್ಥಾನದ ಕಾರ್ಯಕಾರಿ ಸಮಿತಿಯವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.