ADVERTISEMENT

ಮಧುಸೂದನ್‌ ‘ಹರಿಹರ ಕಂಠೀರವ’

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 6:01 IST
Last Updated 9 ಡಿಸೆಂಬರ್ 2020, 6:01 IST
ತರಬೇತುದಾರ ಶಿವಾನಂದ್ ಜೊತೆ ಮಧುಸೂದನ್
ತರಬೇತುದಾರ ಶಿವಾನಂದ್ ಜೊತೆ ಮಧುಸೂದನ್   

ಹರಿಹರ: ಇಲ್ಲಿನ ನಾಡಬಂದ್‌ ಷಾವಲಿ ಗರಡಿ ಕುಸ್ತಿ ಜೀರ್ಣೋದ್ಧಾರ ಸಮಿತಿಯಿಂದ ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ 86 ಕೆ.ಜಿಯಿಂದ 125 ಕೆ.ಜಿವರೆಗಿನ ವಿಭಾಗದಲ್ಲಿ ದಾವಣಗೆರೆಯ ಕ್ರೀಡಾ ನಿಲಯದ ಕುಸ್ತಿಪಟು ಮಧುಸೂದನ್ ಅವರು ‘ಹರಿಹರ ಕಂಠೀರವ –2020’ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಇಲ್ಲಿನ ಗಾಂಧಿ ಮೈದಾನದಲ್ಲಿ ಸೋಮವಾರ ಮುಕ್ತಾಯಗೊಂಡ ಪಂದ್ಯಾವಳಿಯ ಫೈನಲ್‌ನಲ್ಲಿ ನಾಗರಾಜ್ ಬೆಳಗಾವಿ ಅವರ ವಿರುದ್ಧ 10–6 ಪಾಯಿಂಟ್ಸ್ ಅಂತರದಿಂದ ಗೆದ್ದು ಬೆಳ್ಳಿ ಗದೆ ಹಾಗೂ ನಗದು ಬಹುಮಾನ ಗೆದ್ದುಕೊಂಡಿದ್ದಾರೆ.

ಮಧುಸೂದನ್ ಅವರು ಕುಸ್ತಿ ತರಬೇತುದಾರ ಶಿವಾನಂದ್ ಅವರ ಶಿಷ್ಯ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಬಿ.ಶ್ರೀನಿವಾಸ್ ಅಭಿನಂದಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.