ಗಂಜೀನಹಳ್ಳಿ (ನ್ಯಾಮತಿ): ತಾಲ್ಲೂಕಿನ ಗಂಜೀನಹಳ್ಳಿ ಗ್ರಾಮದ ರೈತ ಕೊಡಚಗೊಂಡನಹಳ್ಳಿ ಹಾಲಪ್ಪ ಅವರ ಸಾಕು ಎತ್ತಿಗೆ ಮಂಗಳವಾರ ಹಾವು ಕಚ್ಚಿದ ಪರಿಣಾಮ ಸಾವನ್ನಪ್ಪಿದೆ.
ತಮ್ಮ ಜಮೀನಿನಲ್ಲಿ ಎರಡು ಎತ್ತುಗಳನ್ನು ಕಟ್ಟಿದ್ದರು. ಈ ವೇಳೆ ಒಂದು ಎತ್ತಿಗೆ ಹಾವು ಕಚ್ಚಿದ್ದರಿಂದ ಸ್ಥಳದಲ್ಲಿಯೇ ಮರಣ ಹೊಂದಿದೆ. ಇದರಿಂದ ಅಂದಾಜು ₹ 60,000 ನಷ್ಟವಾಗಿದೆ. ಪಶು ವೈದ್ಯರು ತಪಾಸಣೆ ಮಾಡಿದ ಬಳಿಕ ಸ್ವಂತ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು ಎಂದು ರೈತ ಹಾಲಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.