ADVERTISEMENT

ತಾಯಿ, ತಂಗಿ ಕೊಲೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 1:02 IST
Last Updated 10 ಜನವರಿ 2021, 1:02 IST

ಪ್ರಜಾವಾಣಿ ವಾರ್ತೆ

ದಾವಣಗೆರೆ: ಮಲೇಬೆನ್ನೂರು ಸಮೀಪದ ಯಕ್ಕೆಗೊಂದಿ ಗ್ರಾಮದಲ್ಲಿ ನಡೆದ ಜೋಡಿಕೊಲೆ ಮಾಡಿದ ಆರೋಪಿಯನ್ನು ಹರಿಹರ ಬೈಪಾಸ್ ಬಳಿ ಪೊಲೀಸರು ಬಂಧಿಸಿದ್ದಾರೆ.

ಕೆ.ಭರಮಗೌಡ ಅಲಿಯಾಸ್ ಭರಮನಗೌಡ (43) ಬಂಧಿತ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆಸ್ತಿ ಪಾಲು ಮಾಡಿಕೊಡುವ ವಿಚಾರದಲ್ಲಿನ ವೈಷಮ್ಯದಿಂದಾಗಿ ತಾಯಿ ಸರೋಜಮ್ಮ ಹಾಗೂ ಸಹೋದರಿ ಜ್ಯೋತಿ ಅವರನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಭರಮಗೌಡನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ADVERTISEMENT

ಆಸ್ತಿ ವಿವಾದ ಕೋರ್ಟಿನಲ್ಲಿ ವಿಚಾರಣೆ ಇದ್ದು, ವಿಚಾರಣೆ ಮುಗಿಸಿಕೊಂಡು ಬರುತ್ತಿದ್ದವರ ಮೇಲೆ ಟ್ರಾಕ್ಟರ್ ಡಿಕ್ಕಿ ಹೊಡೆಸಿ ಕೊಲೆ ಮಾಡಿದ್ದ. ಜ್ಯೋತಿ ಅವರ ಪತಿ ಶಿವರಾಜ ಅವರ ದೂರಿನ ಮೇರೆಗೆ ಮಲೇಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ತಂಡ ರಚನೆ: ಡಿವೈಎಸ್ಪಿ ನರಸಿಂಹ ವಿ.ತಾಮ್ರಧ್ಜಜ, ಹರಿಹರ ವೃತ್ತದ ಸಿಪಿಐ (ಪ್ರಭಾರ) ಜೆ.ಲಕ್ಷ್ಮಣ್ ಅವರ ನೇತೃತ್ವದಲ್ಲಿ ಮಲೇಬೆನ್ನೂರು ಪಿಎಸ್‌ಐ ವೀರಬಸಪ್ಪ ಕುಸಲಾಪುರ, ಸಿಬ್ಬಂದಿ ಬಸವರಾಜ್, ಎಚ್‌.ಜಿ. ಸಂತೋಷ್‌ಕುಮಾರ್, ರಾಜಶೇಖರ್, ಮೂರ್ತಿ ಜೆ.ಎಸ್, ಶಿವಕುಮಾರ್ ಕೆ, ನಾಗಪ್ಪ ಕಡೆಮನಿ, ಮೊಹ್ಮದ್ ಇಲಿಯಾಸ್ ಹಾಗೂ ನಾಗರಾಜ್ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಎಎಸ್ಪಿ ಎಂ.ರಾಜೀವ್ ಅವರು ತಂಡದ ಕಾರ್ಯಕ್ಕೆ ಪ್ರಶಂಸೆ
ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.