ಬಸವಾಪಟ್ಟಣ (ದಾವಣಗೆರೆ): 120 ವರ್ಷಗಳ ಇತಿಹಾಸವಿರುವ ಹತ್ತು ದಿನಗಳ ರಾಮೋತ್ಸವ ಯುಗಾದಿಯ ಮೊದಲ ದಿನವಾದ ಶನಿವಾರ ಶ್ರೀರಾಮ ಮಂದಿರದಲ್ಲಿ ಆರಂಭವಾಯಿತು.
13ಶ್ರೀರಂದು ಶನಿವಾರ ಶ್ರೀರಾಮನವಮಿ ಪ್ರಯುಕ್ತ ಮುಂಜಾನೆ ವಿಶೇಷ ಪೂಜೆಯ ನಂತರ ರಾಜಬೀದಿಯಲ್ಲಿ ಭಜನೆಯೊಂದಿಗೆ ಉತ್ಸವಮೂರ್ತಿಯ ಮೆರವಣಿಗೆ, ರಾಮಾಯಣ ಪ್ರವಚನ, ಪಾನಕ ಕೋಸಂಬರಿ ವಿತರಣೆ ನಡೆಯಲಿದೆ. 14 ರಂದು ಭಾನುವಾರ ರಾಮೋತ್ಸವದ ಸಮಾರೋಪದ ಅಂಗವಾಗಿ ರಾಮತಾರಕ ಹೋಮ, ಶ್ರೀರಾಮ ದೇವರ ತೊಟ್ಟಿಲೋತ್ಸವ. ಅನ್ನ ಸಂತರ್ಪಣೆ, ಸಂಜೆ ಏಳಕ್ಕೆ ರಾಮದೇವರ ಪಾಲಕಿ ಉತ್ಸವ ನಡೆಯಲಿದೆ ಎಂದು ಶ್ರೀರಾಮ ಸೇವಾ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.