ಹೊನ್ನಾಳಿ: ತಾಲ್ಲೂಕಿನ ದಿಡಗುರು ಹರಳಹಳ್ಳಿ ಗ್ರಾಮದಲ್ಲಿ ಅಣ್ಣನ ಸಾವಿನ ಸುದ್ಧಿ ಕೇಳಿ ಅಂತ್ಯ ಸಂಸ್ಕಾರಕ್ಕೆ ಬಂದಿದ್ದ ತಂಗಿಯೂ ಸಾವನ್ನಪ್ಪಿದ್ದಾರೆ.
ಸೋಮವಾರ ರಾತ್ರಿ ಹರಳಹಳ್ಳಿ ಗ್ರಾಮದ ನಿವೃತ್ತ ಕಂದಾಯಾಧಿಕಾರಿ ಪಿ. ಪಂಚಪ್ಪ (76) ಹೃದಯಾಘಾತದಿಂದ ನಿಧನರಾಗಿದ್ದರು.
ಸುದ್ದಿ ತಿಳಿದ ತಂಗಿ ಸುಶೀಲಮ್ಮ ಮಂಗಳವಾರ ಬೆಳಿಗ್ಗೆ ದರ್ಶನ ಮಾಡುತ್ತಿದ್ದ ವೇಳೆ ಅಸ್ವಸ್ಥರಾದರು. ಕೂಡಲೇ ಹೊನ್ನಾಳಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು. ಮೃತರು ಶಿವಮೊಗ್ಗ ಜಿಲ್ಲೆಯ ಚಿನ್ನಿಮನೆ ಗ್ರಾಮದ ಮಾಜಿ ಸೈನಿಕ ಸುರೇಶ್ ಅವರ ಪತ್ನಿ. ಇಬ್ಬರ ಅಂತ್ಯಕ್ರಿಯೆ ಸ್ವಗ್ರಾಮದ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.