ದಾವಣಗೆರೆ: ಇಲ್ಲಿನವಿಶ್ವೇಶ್ವರಯ್ಯ ಉದ್ಯಾನದಲ್ಲಿ ಶುಕ್ರವಾರ ಗೋಡೆಗೆ ಪೋಸ್ಟರ್ ಅಂಟಿಸಲು ಪೇಪರ್ ಮೇಲಿಟ್ಟಿದ್ದ ಗಮ್ಗೆ ಹಾವೊಂದು ಅಂಟಿಕೊಂಡು ಒದ್ದಾಡಿದ್ದು, ಉರಗ ರಕ್ಷಕ ಪ್ರದೀಪ್ ಹಾವನ್ನು ರಕ್ಷಿಸಿದ್ದಾರೆ.
ಗಮ್ಗೆ ಅಂಟಿಕೊಂಡ ಹಾವು ಮುಂದೆ ಹೋಗಲು ಆಗದೆ ಒದ್ದಾಡುತ್ತಿತ್ತು. ಇದನ್ನುಗಮನಿಸಿದ ಸಾರ್ವಜನಿಕರು ಉರಗತಜ್ಞರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಕೂಡಲೇಸ್ಥಳಕ್ಕೆ ಬಂದ ಉರಗ ರಕ್ಷಕ ಪ್ರದೀಪ್ ಹಾವನ್ನು ರಕ್ಷಣೆಮಾಡಿದರು. ಹಾವನ್ನು ರಕ್ಷಣೆ ಮಾಡಿದ ವಿಡಿಯೊ ಹರಿದಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.