ದಾವಣಗೆರೆ: ಇ–ಸ್ವತ್ತು ಮಾಡಿಕೊಡಲು ರೈತರೊಬ್ಬರಿಂದ ₹ 10 ಸಾವಿರ ಲಂಚ ಪಡೆಯುತ್ತಿದ್ದ ಕಕ್ಕರಗೊಳ್ಳದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ತಾಲ್ಲೂಕಿನ ಕಕ್ಕರಗೊಳ್ಳ ಗ್ರಾಮ ಪಂಚಾಯತಿ ಪಿಡಿಒ ವಿಜಯ್ ಗೌಡ ಸಿಕ್ಕಿಬಿದ್ದ ಅಧಿಕಾರಿ. ಇ–ಸ್ವತ್ತು ಮಾಡಿಕೊಡಲುಯರಗುಂಟೆ ಗ್ರಾಮದ ನಿವಾಸಿ ಹಾಲೇಶಪ್ಪ ಅವರಲ್ಲಿ ₹ 10 ಸಾವಿರ ಬೇಡಿಕೆ ಇಟ್ಟಿದ್ದರು. ಈ ವಿಚಾರವನ್ನು ಹಾಲೇಶಪ್ಪ ಭ್ರಷ್ಟಾಚಾರ ನಿಗ್ರಹ ದಳದ ಗಮನಕ್ಕೆ ತಂದಿದ್ದರು. ಹಾಲೇಶಪ್ಪ ಅವರಿಂದ ಪಿಡಿಒ ವಿಜಯ ಗೌಡ ಬುಧವಾರ ಹಣ ಪಡೆಯುತ್ತಿರುವಾಗಲೇ ಎಸಿಬಿಯವರು ದಾಳಿ ನಡೆಸಿದ್ದಾರೆ.
ದಾವಣಗೆರೆ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.