ADVERTISEMENT

ರೈತನಿಂದ ಲಂಚ ಪಡೆಯುತ್ತಿದ್ದ ಪಿಡಿಒ ಎಸಿಬಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2021, 3:30 IST
Last Updated 14 ಅಕ್ಟೋಬರ್ 2021, 3:30 IST

ದಾವಣಗೆರೆ: ಇ–ಸ್ವತ್ತು ಮಾಡಿಕೊಡಲು ರೈತರೊಬ್ಬರಿಂದ ₹ 10 ಸಾವಿರ ಲಂಚ ಪಡೆಯುತ್ತಿದ್ದ ಕಕ್ಕರಗೊಳ್ಳದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ತಾಲ್ಲೂಕಿನ ಕಕ್ಕರಗೊಳ್ಳ ಗ್ರಾಮ ಪಂಚಾಯತಿ ಪಿಡಿಒ ವಿಜಯ್ ಗೌಡ ಸಿಕ್ಕಿಬಿದ್ದ ಅಧಿಕಾರಿ. ಇ–ಸ್ವತ್ತು ಮಾಡಿಕೊಡಲುಯರಗುಂಟೆ ಗ್ರಾಮದ ನಿವಾಸಿ ಹಾಲೇಶಪ್ಪ ಅವರಲ್ಲಿ ₹ 10 ಸಾವಿರ ಬೇಡಿಕೆ ಇಟ್ಟಿದ್ದರು. ಈ ವಿಚಾರವನ್ನು ಹಾಲೇಶಪ್ಪ ಭ್ರಷ್ಟಾಚಾರ ನಿಗ್ರಹ ದಳದ ಗಮನಕ್ಕೆ ತಂದಿದ್ದರು. ಹಾಲೇಶಪ್ಪ ಅವರಿಂದ ಪಿಡಿಒ ವಿಜಯ ಗೌಡ ಬುಧವಾರ ಹಣ ಪಡೆಯುತ್ತಿರುವಾಗಲೇ ಎಸಿಬಿಯವರು ದಾಳಿ ನಡೆಸಿದ್ದಾರೆ.

ದಾವಣಗೆರೆ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.