ದಾವಣಗೆರೆ: ಇಲ್ಲಿನ ಮಂಡಿಪೇಟೆಯ ಕಲ್ಯಾಣ್ ಜ್ಯುವೆಲ್ಲರ್ಸ್ನಲ್ಲಿ ಆಭರಣ ಖರೀದಿ ಸೋಗಿನಲ್ಲಿ ಬಂದ ಕಳ್ಳರು ಚಿನ್ನದ ಸರದ ಬದಲು ನಕಲಿ ಚಿನ್ನದ ಸರ ಇಟ್ಟು ₹ 1.43 ಲಕ್ಷ ಮೌಲ್ಯದ ಆಭರಣ ದೋಚಿದ್ದಾರೆ.
ಈಚೆಗೆ ಆಭರಣ ಮಳಿಗೆಗೆ ಖರೀದಿ ನೆಪದಲ್ಲಿ ಬಂದ ಮೂವರು ಕಳ್ಳರು ಚಿನ್ನದ ಸರವಿದ್ದ ಕೌಂಟರ್ ಬಳಿ ಹೋಗಿ ಚಿನ್ನದ ಬೆಲೆ ವಿಚಾರಿಸಿದ್ದಾರೆ. ಚಿನ್ನವನ್ನು ನೋಡುವ ನೆಪದಲ್ಲಿ ಒಬ್ಬ ಸರವನ್ನು ಕೊರಳಿಗೆ ಧರಿಸಿದ್ದಾನೆ. ಮೊದಲೇ ನಕಲಿ ಚಿನ್ನದ ಸರವನ್ನು ಧರಿಸಿ ಬಂದಿದ್ದ ಆತ ಅಂಗಡಿಯವರ ಗಮನ ಬೇರೆಡೆ ಸೆಳೆಯುವಂತೆ ಮಾಡಿ ಕುತ್ತಿಗೆಗೆ 24 ಗ್ರಾಂನ ಚಿನ್ನದ ಸರ ಧರಿಸಿ ನಕಲಿ ಸರವನ್ನು ವಾಪಸ್ ನೀಡಿದ್ದಾನೆ. ಇದು ಅಂಗಡಿಯವರ ಗಮನಕ್ಕೆ ಬಂದಿಲ್ಲ.
ಮರುದಿನ ಅಂಗಡಿಯಲ್ಲಿ ಎಲ್ಲ ಚಿನ್ನವನ್ನು ಸ್ಕ್ಯಾನ್ ಮಾಡುತ್ತಿದ್ದಾಗ ನಕಲಿ ಸರ ಇರುವುದು ತಿಳಿದಿದೆ. ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.