ದಾವಣಗೆರೆ: ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ ಸಾಸಲು–ಆನಗೋಡು ರಸ್ತೆಯಲ್ಲಿ ಪರಶುರಾಂಪುರ ಕ್ರಾಸ್ ಬಳಿ ಭಾನುವಾರ ರಾತ್ರಿ ಬೈಕ್ಗೆ ಟ್ರ್ಯಾಕ್ಟರ್ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿದ್ದಾರೆ.
ಇಲ್ಲಿನ ಎಚ್ಕೆಆರ್ ನಗರದ ಸಾದಿಕ್ ಉಲ್ಲಾ (30) ಮೃತಪಟ್ಟವರು. ತಾಳ್ಯ ಗ್ರಾಮದಿಂದ ಸಾದಿಕ್ ಉಲ್ಲಾ ತನ್ನ ಬೈಕಲ್ಲಿ ಬಂಬೂ ಬಜಾರ್ನ ಅಂಜಿನಪ್ಪ ಅವರನ್ನು ಕೂರಿಸಿಕೊಂಡು ಬರುತ್ತಿದ್ದರು. ಪರಶುರಾಂಪುರ ಕ್ರಾಸ್ ಬಳಿ ಹಿಂದಿನಿಂದ ಬಂದ ಟ್ರ್ಯಾಕ್ಟರ್ ಓವರ್ಟೇಕ್ ಮಾಡಿ ಯಾವುದೇ ಸೂಚನೆ ನೀಡದೆ ಎಡಕ್ಕೆ ತಿರುಗಿದೆ. ಆಗ ಟ್ರ್ಯಾಕ್ಟರ್ನ ಟ್ರ್ಯಾಲಿ ಬೈಕ್ಗೆ ತಾಗಿದೆ. ಬೈಕ್ ರಸ್ತೆಗೆ ಬಿದ್ದು ಸಾದಿಕ್ ಉಲ್ಲಾ ಮೃತಪಟ್ಟಿದ್ದಾರೆ. ಅಂಜಿನಪ್ಪ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರ್ಯಾಕ್ಟರ್ ನಂಬರ್, ಚಾಲಕ ಯಾರು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.