ADVERTISEMENT

ಅವಳಿ ನಗರದಲ್ಲಿ ಮಳೆಯ ಆರ್ಭಟ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 6:55 IST
Last Updated 13 ಅಕ್ಟೋಬರ್ 2011, 6:55 IST
ಅವಳಿ ನಗರದಲ್ಲಿ ಮಳೆಯ ಆರ್ಭಟ
ಅವಳಿ ನಗರದಲ್ಲಿ ಮಳೆಯ ಆರ್ಭಟ   

ಹುಬ್ಬಳ್ಳಿ/ಧಾರವಾಡ: ಅವಳಿನಗರದಲ್ಲಿ ಬುಧವಾರ ಮತ್ತೆ ಧಾರಾಕಾರವಾಗಿ ಮಳೆ ಸುರಿದಿದೆ. ನಸುಕಿನಲ್ಲೇ ಶುರುವಾಗಿದ್ದ ಮಳೆ ಮಧ್ಯೆ ಒಂದಿಷ್ಟು ಬಿಡುವು ನೀಡಿತ್ತಾದರೂ ಸಂಜೆ ಮತ್ತೆ ಆರ್ಭಟಿಸಿತು. ಹುಬ್ಬಳ್ಳಿಗಿಂತ ಧಾರವಾಡದಲ್ಲಿ ಮಳೆಯ ಆಟಾಟೋಪ ಜೋರಾಗಿತ್ತು.

ಧಾರವಾಡದ ಮುರುಘಾಮಠ ಹಿಂದಿನ ಹಾವೇರಿಪೇಟೆಯಲ್ಲಿ ಮಳೆಯಿಂದ ರಸ್ತೆಗಳೆಲ್ಲ ಕಾಲುವೆ ರೂಪ ತಾಳಿದ್ದವು. ಮನೆಗಳಿಗೂ ನೀರು ನುಗ್ಗಿತ್ತು. ಇದೇ ಪ್ರದೇಶದ ಈಶ್ವರ ದೇವಸ್ಥಾನದ ಗರ್ಭಗುಡಿವರೆಗೆ ಮಳೆ ನೀರು ಹರಿದಾಡಿತು. ಕೊಪ್ಪದಕೇರಿಯ ಶಿವಾಲಯ ಜಲಾವೃತವಾಗಿತ್ತು. ರಸ್ತೆಗಳಲ್ಲೆಲ್ಲ ನೀರಿನ ಪ್ರವಾಹ ಹೆಚ್ಚಿದ್ದರಿಂದ ವಾಹನಗಳ ಓಡಾಟಕ್ಕೂ ಅಡಚಣೆಯಾಯಿತು.

ಮನೆಗೆ ನುಗ್ಗಿದ ಮಳೆ ನೀರನ್ನು ಹೊರಗೆ ಹಾಕಲು ನಿವಾಸಿಗಳು ಮಧ್ಯರಾತ್ರಿವರೆಗೆ ಹೆಣಗಾಡಿದರು. ಹುಬ್ಬಳ್ಳಿಯಲ್ಲೂ ಸಂಜೆ ಮಳೆ ಬಿರುಸಿನಿಂದ ಸುರಿಯಿತು. ಮಾರ್ಕೆಟ್‌ಗೆ ತೆರಳಿದ್ದ ಜನ ಮಳೆಯಿಂದ ಪ್ರಯಾಸಪಡಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.