ಧಾರವಾಡ: ಬ್ಯಾಟರಿ ಸಮಸ್ಯೆಯಿಂದಾಗಿ ಕಳೆದ ಕೆಲವು ದಿನಗಳಿಂದ ಸ್ಥಗಿತಗೊಂಡಿದ್ದ ಭೂಮಿ ಕೋಶ, ಶುಕ್ರವಾರದಿಂದ ಮತ್ತೆ ಕಾರ್ಯಾರಂಭ ಮಾಡಿದೆ.
‘ಭೂಮಿ’ ಕೋಶ ಸ್ಥಗಿತ: ಜನರ ಪರದಾಟ’ ಎಂಬ ವಿಶೇಷ ವರದಿ ಮಾರ್ಚ್ 2ರ ‘ಪ್ರಜಾವಾಣಿ’ ಯಲ್ಲಿ ಪ್ರಕಟಗೊಂಡಿತ್ತು. ಇದಾಗಿ ಒಂದು ವಾರದೊಳಗಾಗಿ ಬ್ಯಾಟರಿ ಬದಲಿಸಲಾಗಿದೆ.
‘ಕಂದಾಯ ಇಲಾಖೆಯ ಭೂಮಿ ಕೋಶದಲ್ಲಿ 3.5ಕಿಲೋ ವಾಟ್ ಸಾಮರ್ಥ್ಯದ ನೂತನ ಬ್ಯಾಟರಿಗಳನ್ನು ಅಳವಡಿಸಲಾಗಿದೆ’ ಎಂದು ತಹಶೀಲ್ದಾರ್ ಪ್ರಕಾಶ ಕುದರಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.