‘ಮಯೂರ’ ಸಿನಿಮಾದಲ್ಲಿ ಡಾ.ರಾಜಕುಮಾರ್ ಹಾಡಿ, ನಟಿಸಿರುವ ‘ನಾನಿರುವುದೇ ನಿಮಗಾಗಿ, ನಾಡಿರುವುದೇ ನಮಗಾಗಿ’ ಹಾಡನ್ನು ನರೇಂದ್ರ ಮೋದಿ ಸಾಧನೆಗಳೊಟ್ಟಿಗೆ ಜೋಡಿಸಿದ್ದುದು ನೆರೆದವರನ್ನು ರಂಜಿಸಿತು. ‘ಸಿಂಗಂ’ ಸಿನಿಮಾದ ಟೈಟಲ್ ಹಾಡಿಗೆ ನರೇಂದ್ರ ಮೋದಿಯ ವಿವಿಧ ಭಂಗಿಗಳ ಚಿತ್ರಗಳನ್ನು ಅಳವಡಿಸಿದ್ದು ಹಾಗೂ ಮೋದಿ ಭಾವಚಿತ್ರ ತೋರಿಸುವಾಗ ಸಿಂಹದ ಘರ್ಜನೆ ಮೊಳಗಿದ್ದು ವಿಶೇಷವಾಗಿತ್ತು. ತುಂಬಲು ನೆರವಾಯಿತು.
ರ್ಯಾಲಿ ನಡೆದ ಮೈದಾನಕ್ಕೆ ‘ಸಿದ್ಧಾರೂಢರ ನಗರ’ ಎಂದು ಹೆಸರಿಟ್ಟಿದ್ದು, ಕೆಲವರ ಆಕ್ಷೇಪಕ್ಕೆ ಕಾರಣವಾಯಿತು. ಅದನ್ನು ವಿರೋಧಿಸಿ ಕಪ್ಪು ಪಟ್ಟಿ ಪ್ರದರ್ಶನಕ್ಕೆ ಮುಂದಾಗಿದ್ದ ಗುಂಪೊಂದು ಧಾರವಾಡದಲ್ಲಿ ಜಿಲ್ಲಾಧಿಕಾರಿಗೂ ದೂರು ಸಲ್ಲಿಸಿತು. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ನೀಡಿದ ಭರವಸೆಯ ಹಿನ್ನೆಲೆಯಲ್ಲಿ ಕೊನೆಯ ಗಳಿಗೆಯಲ್ಲಿ ತನ್ನ ನಿರ್ಧಾರ ಕೈ ಬಿಟ್ಟಿತು. ಮುಖ್ಯ ವೇದಿಕೆಗೆ ಜಗನ್ನಾಥರಾವ್ ಜೋಶಿ ವೇದಿಕೆ ಎಂದು ಹೆಸರಿಡಲಾಗಿತ್ತು. ಉಳಿದ ಎರಡು ವೇದಿಕೆಗಳಿಗೆ ಸದಾಶಿವಶೆಟ್ಟರ್ ಹಾಗೂ ಎಂ.ಜೆ.ಜರತಾರಘರ ಅವರ ಹೆಸರನ್ನು ಇಡಲಾಗಿತ್ತು.
*ವಂದೇ ಮಾತರಂ ಗೀತೆಯೊಂದಿಗೆ ಸಮಾರಂಭ ಆರಂಭವಾಯಿತು. ಈ ಸಂದರ್ಭದಲ್ಲಿ ಮುಖ್ಯ ವೇದಿಕೆಯ ಮೇಲ್ಭಾಗದಲ್ಲಿ ಕಪ್ಪು ಬಣ್ಣದ ಬಲೂನುಗಳು ಹಾರಾಡಿದವು. ಅಪರಿಚಿತರು ಹಾರಿಬಿಟ್ಟ ಬಲೂನುಗಳು ಕೆಲ ಕಾಲ ಸಂಘಟಕರನ್ನು ಗಲಿಬಿಲಿಗೊಳಿಸಿದವು.
* ಭ್ರಷ್ಟಾಚಾರ ಮುಕ್ತ ರಾಷ್ಟ್ರ ನಿರ್ಮಾಣ ಬಗ್ಗೆ ನರೇಂದ್ರ ಮೋದಿ ಪ್ರಸ್ತಾಪಿಸುತ್ತಿದ್ದಂತೆಯೇ ವೇದಿಕೆಯ ಮೇಲಿದ್ದ ಗಣ್ಯರು ಹಾಗೂ ರ್ಯಾಲಿಯಲ್ಲಿ ಪಾಲ್ಗೊಂಡವರು ಒಂದು ಕೈ ಮೇಲೆತ್ತಿ ಬೆಂಬಲ ವ್ಯಕ್ತಪಡಿಸಿದರೆ, ಗಣ್ಯರ ಸಾಲಿನಲ್ಲಿ ನಿಂತಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎರಡೂ ಕೈ ಎತ್ತಿ ಬೆಂಬಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.