ಹುಬ್ಬಳ್ಳಿ: ‘ಸರ್ದಾರ್ ವಲ್ಲಭಭಾಯಿ ಪಟೇಲ್ ದೇಶ ಕಂಡ ಅಪ್ರತಿಮ ನಾಯಕ. ಭಾರತವನ್ನು ವಿಭಜನೆ ಮಾಡದಂತೆ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಮೌಂಟ್ ಬ್ಯಾಟನ್ಗೆ ಆಗಲೇ ಎಚ್ಚರಿಕೆ ನೀಡಿದವರು ಪಟೇಲ್. ಒಂದು ವೇಳೆ, ಪಟೇಲರೇ ದೇಶದ ಪ್ರಥಮ ಪ್ರಧಾನಮಂತ್ರಿಯಾಗಿದ್ದರೆ, ಭಾರತ ಜಗತ್ತಿನಲ್ಲಿಯೇ ಅತ್ಯಂತ ಬಲಿಷ್ಠ ರಾಷ್ಟ್ರವಾಗಿರುತ್ತಿತ್ತು’ ಎಂದು ಧನ್ಯೋಸ್ಮಿ ಯೋಗ ಕೇಂದ್ರದ ಗುರುಗಳಾದ ವಿನಾಯಕ ತೆಲಗೇರಿ ಅಭಿಪ್ರಾಯಪಟ್ಟರು.
ನಗರದಲ್ಲಿ ಭಾರತೀಯ ಜನತಾ ಪಕ್ಷದಿಂದ ಭಾನುವಾರ ಹಮ್ಮಿಕೊಂಡಿದ್ದ ‘ಏಕತಾ ರ್್ಯಾಲಿ’ಯ ನಂತರ ಮೂರು ಸಾವಿರ ಮಠದ ಆವರಣದಲ್ಲಿ ನಡೆದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ‘ಪಟೇಲರು ಕೋರ್ಟ್ನಲ್ಲಿ ತಮ್ಮ ಕಕ್ಷಿದಾರರ ಪರ ಕೋರ್ಟ್ನಲ್ಲಿ ವಾದ ಮಂಡಿಸುತ್ತಿರುವ ಸಂದರ್ಭದಲ್ಲಿ ಒಂದು ಟೆಲಿಗ್ರಾಂ ಬಂದಿತು. ಅದರಲ್ಲಿ ಅವರ ಪತ್ನಿ ಜವೇರಿಬಾಯಿ ಪಟೇಲ್ ನಿಧನರಾದ ಸುದ್ದಿ ಇತ್ತು. ಈ ವಿಷಯ ತಿಳಿದಾಗಲೂ ವಿಚಲಿತರಾಗದ ಪಟೇಲ್, ವಾದ ಮಂಡಿಸಿ, ಅದರಲ್ಲಿ ಗೆಲುವು ಸಾಧಿಸಿದರು’ ಎಂದರು.
ಆರ್.ಪಿ. ನವಲೆ ಹಾಜರಿದ್ದರು. ಸತೀಶ ಶೇಜವಾಡಕರ ನಿರೂಪಿಸಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಪಾಟೀಲ ನಿರೂಪಿಸಿದರು. ಸಿದ್ದು ಮೊಗಲಿಶೆಟ್ಟರ್, ರಾಜು ಜರತಾರಗರ್, ಗೋಪಾಲ ಬದ್ದಿ, ಸುದರ್ಶನ್ ದಿನ್ನಿಹಳ್ಳಿ, ಡಿ.ಕೆ. ಚವ್ಹಾಣ್, ಉಮಾ ಅಕ್ಕೂರ, ರಂಜನಾ ಬಂಕಾಪುರ,ಸುಧೀರ ಸರಾಫ್, ಮಹೇಂದ್ರ ಕೌತಾಳ, ಶಿವು ಮೆಣಸಿನಕಾಯಿ ಹಾಗೂ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ವಲ್ಲಭಭಾಯಿ ಪಟೇಲ್ರಾಷ್ಟ್ರೀಯ ಏಕತಾ ವತಿಯಿಂದ ಆಯೋಜಿಸಲಾಗಿದ್ದ ರ್್ಯಾಲಿ ಚನ್ನಮ್ಮ ವೃತ್ತದಿಂದ ಆರಂಭಗೊಂಡು, ಲ್ಯಾಮಿಂಗ್ಟನ್ ರಸ್ತೆ, ಕೊಪ್ಪಿಕರ್ ರಸ್ತೆ, ದುರ್ಗದ ಬೈಲ್, ದಾಜಿಬಾನ್ ಪೇಟ್ ಮಾರ್ಗವಾಗಿ ಮೂರುಸಾವಿರ ಮಠದ ಬಳಿ ಸಮಾರೋಪಗೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.