ಹುಬ್ಬಳ್ಳಿ: ಗೋಕುಲ ರಸ್ತೆಯ ಗೋಕುಲ ಕ್ರಾಸ್ ರಸ್ತೆ ಬದಿ ಮಂಗಳವಾರ ಕಟ್ಟಡ ತ್ಯಾಜ್ಯ ಸುರಿಯುತ್ತಿದ್ದ ಶಿವಾಜಿ ಎಂಬುವರಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು ₹5 ಸಾವಿರ ದಂಡ ವಿಧಿಸಿದ್ದಾರೆ.
ಶಿವಾಜಿ ಅವರು ಲಾರಿಯಲ್ಲಿ ತ್ಯಾಜ್ಯ ತಂದು ಕಾನೂನುಬಾಹಿರವಾಗಿ ರಸ್ತೆ ಬದಿ ಸುರಿಯುತ್ತಿದ್ದರು. ಆಗ ಸ್ಥಳಕ್ಕೆ ಬಂದ ಪಾಲಿಕೆಯ ವಲಯ ಕಚೇರಿ –7ರ ಪರಿಸರ ಎಂಜಿನಿಯರ್ ಜ್ಯೋತಿ ಬಿ.ಎಚ್, ಆರೋಗ್ಯ ನಿರೀಕ್ಷಕಿ ಯಲ್ಲಮ್ಮ ಚಳಗೇರಿ ಅವರು ಶಿವಾಜಿ ಅವರಿಗೆ ದಂಡ ವಿಧಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.