
ಹುಬ್ಬಳ್ಳಿ: ಸತ್ತೂರಿನ ನಾರಾಯಣ ಪಾರಾಯಣ ಬಳಗದಿಂದ ಈಚೆಗೆ ಉದಯಗಿರಿಯ ಡಿ.ಕೆ. ಜೋಶಿ ಅವರ ನಿವಾಸದಲ್ಲಿ ಅನಂತ ವ್ರತದ ಮಹಿಮೆಯ ಕುರಿತು ವಿಶೇಷ ಉಪನ್ಯಾಸ ನಡೆಯಿತು.
ಅಚ್ಯುತಾಚಾರ್ಯ ಗಲಗಲಿ ಮಾತನಾಡಿದರು. ಪ್ರವಚನಕ್ಕೂ ಮುನ್ನ ಬಳಗದ ಸದಸ್ಯರಿಂದ ವಿಷ್ಣು ಸಹಸ್ರನಾಮ, ವೆಂಕಟೇಶ ಸ್ತೋತ್ರ, ರಾಮ ಸ್ತೋತ್ರ, ಸೂಕ್ತ, ಹರಿವಾಯುಸ್ತುತಿ, ಮದರಾಘವೇಂದ್ರ ಸ್ತೋತ್ರಗಳ ಪಾರಾಯಣ ನಡೆಯಿತು.
ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ಶ್ರೀನಿವಾಸ ಪಟ್ಟಣಕೋಡಿ, ವಿಠಲ ಅಂಬೇಕರ, ರಮೇಶ ಅಣ್ಣಿಗೇರಿ, ಸುಧೀರ ವಾಳ್ವೇಕರ, ಸಿ.ಕೆ. ಕುಲಕರಣಿ, ಭೀಮಸೇನ ದಿಗ್ಗಾವಿ, ಪ್ರಮೋದ ಶಿರಗುಪ್ಪಿ, ಹನುಮಂತ ಪುರಾಣಿಕರು, ವೆಂಕಟೇಶ ಕುಲಕರ್ಣಿ, ಸುಧೀರ ವಾಳ್ವೇಕರ, ರಾಘವೇಂದ್ರ ಮುಂಡಗೋಡ, ಹನುಮಂತ ಬಿಜಾಪುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.