ಹುಬ್ಬಳ್ಳಿ: ಪ್ರಯಾಣಿಕರು ವಾಹನದಲ್ಲಿ ಬಿಟ್ಟು ಹೋಗಿದ್ದ ಹಣ ಹಾಗೂ ದಾಖಲೆಗಳಿದ್ದ ಬ್ಯಾಗ್ ಅನ್ನು ಆಟೊ ಚಾಲಕ ಶಬ್ಬೀರ್ ಅಹ್ಮದ್ ಮರಳಿಸಿದ್ದಾರೆ.
ಬೆಂಗಳೂರಿನ ಎಂ.ಸಿ. ಕುಮಾರ್ ಹಾಗೂ ಇತರ ಮೂವರು ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಬಂದಿದ್ದರು. ವಿಮಾನ ನಿಲ್ದಾಣದ ಮುಂಭಾಗದಿಂದ ದುರ್ಗದ ಬೈಲ್ಗೆ ಪ್ರಯಾಣಿಸಲು ಅವರು ಆಟೊ ಹತ್ತಿದ್ದರು. ಇಳಿಯುವಾಗ ಬ್ಯಾಗ್ ಬಿಟ್ಟು ಹೋಗಿದ್ದಾರೆ. ಇದನ್ನು ಗಮನಿಸಿದ ಶಬ್ಬೀರ್ ಅವರು ಬ್ಯಾಗ್ ಪೊಲೀಸ್ ಠಾಣೆಗೆ ತಂದು ನೀಡಿದರು. ಅದನ್ನು ಮಾಲೀಕರಿಗೆ ಒಪ್ಪಿಸಲಾಗಿದೆ ಎಂದು ಇನ್ಸ್ಪೆಕ್ಟರ್ ಡಿ.ಪಿ. ನಿಂಬಾಳಕ್ ತಿಳಿಸಿದ್ದಾರೆ.
ಬ್ಯಾಗ್ನಲ್ಲಿ ಎಟಿಎಂ ಕಾರ್ಡ್, ಕೆಲ ದಾಖಲೆ ಹಾಗೂ ₹3 ಸಾವಿರ ಹಣವಿತ್ತು ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.