ADVERTISEMENT

ಆ. 11ರಂದು ಹುಬ್ಬಳ್ಳಿಯಲ್ಲಿ ವಧು–ವರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 13:20 IST
Last Updated 6 ಆಗಸ್ಟ್ 2019, 13:20 IST

ಹುಬ್ಬಳ್ಳಿ: ಗುರು ಅಸೋಸಿಯೇಟ್ಸ್‌ ಸಂಸ್ಥೆ ಆ. 11ರಂದು ಬೆಳಿಗ್ಗೆ 10 ಗಂಟೆಯಿಂದ ಮಿನಿವಿಧಾನ ಸೌಧದ ಎದುರು ಇರುವ ಕೆ.ಸಿ.ಸಿ. ಬ್ಯಾಂಕ್‌ ಸಭಾಭವನದಲ್ಲಿ ರಾಜ್ಯಮಟ್ಟದ ವೀರಶೈವ ಲಿಂಗಾಯತರ ವಧು–ವರರ ಹಾಗೂ ಪಾಲಕರ ಪರಸ್ಪರ ಪರಿಚಯ ಸಮಾವೇಶ ಹಮ್ಮಿಕೊಂಡಿದೆ.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಿ.ಬಿ. ದುಂಡಪ್ಪನವರ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘11 ವರ್ಷಗಳಿಂದ ಈ ಸಮಾವೇಶ ಮಾಡಿಕೊಂಡುಬಂದಿದ್ದೇವೆ. ವೀರಶೈವ ಲಿಂಗಾಯತ ಹಾಗೂ ಎಲ್ಲ ಒಳ ಪಂಗಡಗಳ ವಧು–ವರರ ಸಮಾವೇಶ ಕೂಡ ನಡೆಯಲಿದೆ. ಮಧ್ಯಾಹ್ನ 1ರಿಂದ 4 ಗಂಟೆ ತನಕ ವಿಧುರರ ಹಾಗೂ ವಿಚ್ಛೇದಿತರಿಗಾಗಿ ಸಮಾವೇಶ ಆಯೋಜಿಸಲಾಗಿದೆ’ ಎಂದು ತಿಳಿಸಿದರು.

ಹೆಸರು ನೋಂದಾಯಿಸಲು ಧಾರವಾಡ ರೈಲ್ವೆ ನಿಲ್ದಾಣದ ಬಳಿ ಇರುವ ಸೇವಾ ಕೇಂದ್ರ ಅಥವಾ ಮೊ. 7349451628 ಸಂಪರ್ಕಿಸಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.