ADVERTISEMENT

ಸಮೀಕ್ಷೆ; ಧರ್ಮದ ಕಾಲಂನಲ್ಲಿ ಜೈನ ನಮೂದಿಸಿ: ಗುಣಧರ ನಂದಿ ಮಹಾರಾಜ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 0:07 IST
Last Updated 22 ಸೆಪ್ಟೆಂಬರ್ 2025, 0:07 IST
<div class="paragraphs"><p>ಗುಣಧರನಂದಿ ಮಹಾರಾಜ</p></div>

ಗುಣಧರನಂದಿ ಮಹಾರಾಜ

   

ಹುಬ್ಬಳ್ಳಿ: ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಜೈನ ಸಮಾಜದವರು ಧರ್ಮದ ಕಾಲಂನಲ್ಲಿ ‘ಜೈನ’ ಎಂದು ನಮೂದಿಸಬೇಕು. ಹಿಂದೂ ಎಂದು ಬರೆಸಬಾರದು’ ಎಂದು ಇಲ್ಲಿನ ವರೂರು ನವಗ್ರಹತೀರ್ಥ ಕ್ಷೇತ್ರದ ಗುಣಧರನಂದಿ ಮಹಾರಾಜರ ನೇತೃತ್ವದಲ್ಲಿ ಭಾನುವಾರ ಜೂಮ್ ಆ್ಯಪ್‌ ಮೂಲಕ ನಡೆದ ಜೈನ ಮಠಗಳ ಭಟ್ಟಾರಕರು, ಸಮಾಜದ ಪ್ರಮುಖರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

‘ಸಮೀಕ್ಷೆ ವಿಷಯದಲ್ಲಿ ಸಾಕಷ್ಟು ಗೊಂದಲಗಳಿದ್ದು, ರಾಜ್ಯ ಸರ್ಕಾರ ಈವರೆಗೂ ಸ್ಪಷ್ಟನೆ ನೀಡಿಲ್ಲ. ಸಮಾಜದ ನಿಯೋಗವು ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಲಿದೆ. ಹೀಗಾಗಿ ಸಮಾಜದವರು ಸೆ.23ರಿಂದ ಗಣತಿದಾರರಿಗೆ ಮಾಹಿತಿ ನೀಡಬೇಕು’ ಎಂದು ಗುಣಧರ ನಂದಿ ಮಹಾರಾಜರು ಹೇಳಿದರು.

ADVERTISEMENT

‘ಜೈನ ಸಮಾಜಕ್ಕೆ ಸಂಬಂಧ ಇಲ್ಲದ ಕೆಲವು ಜಾತಿಗಳು ಜಾತಿಪಟ್ಟಿಯಲ್ಲಿದ್ದು, ಅವುಗಳನ್ನು ತೆಗೆದು ಹಾಕಬೇಕು. ಸಮೀಕ್ಷೆ ಅವಧಿಯನ್ನು ವಿಸ್ತರಿಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.