ಕಲಘಟಗಿ: ತಾಲ್ಲೂಕಿನ ತುಮ್ಮರಿಕೊಪ್ಪ ಹಾಗೂ ರಂಗಾಪುರ ಗ್ರಾಮದ ಇಬ್ಬರು ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಂತೋಷ್ ಲಾಡ್ ಫೌಂಡೇಷನ್ನಿಂದ ನೆರವು ನೀಡಲಾಯಿತು.
ಪ್ಯಾರಾಮೆಡಿಕಲ್ ಶಿಕ್ಷಣಕ್ಕಾಗಿ ಜಾಸಿಂತ್ ಇನಿಯಪ್ಪನಾಯರ ಅವರಿಗೆ ₹ 20 ಸಾವಿರ ಹಾಗೂ ಹಾನ್ಸಲ್ ಕರಾರ್ನೋರ್ ಅವರಿಗೆ ₹ 15 ಸಾವಿರ ನೀಡಲಾಯಿತು.
ವಿದ್ಯಾರ್ಥಿಗಳು ಮಾತನಾಡಿ, ನಮ್ಮ ಮುಂದಿನ ಶಿಕ್ಷಣ ಮುಂದುವರಿಸಲು ಆಗದೆ ಇರುವ ಕಾರಣ ಸಂತೋಷ್ ಲಾಡ್ ಅವರ ನೆರವು ಕೇಳಿದೆವು, ಕೂಡಲೇ ಸ್ಪಂದಿಸಿದರು ಎಂದರು. ಲಾಡ್ ಅವರ ಆಪ್ತ ಕಾರ್ಯದರ್ಶಿ ಹರಿಶಂಕರ ಮಠದ, ಸೋಮಶೇಖರ ಬೆನ್ನೂರ, ಎಸ್.ಆರ್. ಪಾಟೀಲ, ಮಂಜುನಾಥ ಮುರಳ್ಳಿ, ಬಾಬು ಅಂಚಟಗೇರಿ, ನರೇಶ ಮಲೆನಾಡು, ಶಿವಲಿಂಗ ಮುಗಣ್ಣವರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.