ADVERTISEMENT

ಧಾರವಾಡ | ಯುವತಿ ವಿಚಾರಕ್ಕೆ ಜಗಳ: ಚಾಕು ಇರಿತ, ಮೂವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2023, 15:35 IST
Last Updated 11 ಆಗಸ್ಟ್ 2023, 15:35 IST
   

ಧಾರವಾಡ: ನಗರದ ಎಲ್‌ಐಸಿ ಕಚೇರಿ ಸಮೀಪ ಆಟೊ ರಿಕ್ಷಾದಲ್ಲಿ ಬಂದ ನಾಲ್ವರು ಮೂವರಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಶುಕ್ರವಾರ ನಡೆದಿದೆ. ಯುವತಿ ವಿಚಾರದಲ್ಲಿ ಗಲಾಟೆಯಾಗಿ ಕೃತ್ಯ ಎಸಗಿದ್ಧಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಗದ ಗ್ರಾಮದ ಕಿರಣ್‌, ಧಾರವಾಡ ಆಸೀಫ್‌ ಹುನಗುಂದ ಹಾಗೂ ಶಾನುವಾಜ್‌ ಅವರಿಗೆ ಹೊಟ್ಟೆ ಮತ್ತು ಬೆನ್ನಿಗೆ ಇರಿಯಲಾಗಿದೆ. ಮೂವರನ್ನು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ದಾಖಲಿಸಲಾಗಿದೆ.

‘ಅಮ್ಮಿನಭಾವಿಯ ಯವತಿಯೊಬ್ಬರ ವಿಚಾರದಲ್ಲಿ ಕಿರಣ್‌ ಮತ್ತು ಸಾಹಿಲ್‌ ನಡುವೆ ಗಲಾಟೆ ನಡೆದಿದೆ. ಸಾಹಿಲ್‌ ಸಹಿತ ನಾಲ್ವರು ಆಟೊ ರಿಕ್ಷಾದಲ್ಲಿ ಬಂದು ಕೃತ್ಯ ಎಸಗಿದ್ಧಾರೆ ಎಂದು ಗೊತ್ತಾಗಿದೆ. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದೇವೆ’ ಎಂದು ಉಪನಗರ ಠಾಣೆ ಪಿಎಸ್‌ಐ ‘ಪ್ರಜಾವಾಣಿ‘ಗೆ ತಿಳಿಸಿದರು.

ADVERTISEMENT

ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ಧಾರೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.