ADVERTISEMENT

ನಿವೃತ್ತಿ ದಿನದಂದು ಶ್ಲಾಘನೀಯ ಕಾರ್ಯ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 8:26 IST
Last Updated 1 ಆಗಸ್ಟ್ 2020, 8:26 IST
ಸಾರಿಗೆ ಇಲಾಖೆಯಿಂದ ಶುಕ್ರವಾರ ನಿವೃತ್ತಿಯಾದ ಚನ್ನಬಸಪ್ಪ ಮಹಾದೇವಪ್ಪ ಯಳಲಿ ಅವರಿಗೆ ಅಧಿಕಾರಿಗಳು ಸನ್ಮಾನಿಸಿದರು
ಸಾರಿಗೆ ಇಲಾಖೆಯಿಂದ ಶುಕ್ರವಾರ ನಿವೃತ್ತಿಯಾದ ಚನ್ನಬಸಪ್ಪ ಮಹಾದೇವಪ್ಪ ಯಳಲಿ ಅವರಿಗೆ ಅಧಿಕಾರಿಗಳು ಸನ್ಮಾನಿಸಿದರು   

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗದಲ್ಲಿ ಕಾರ್ಯ ನಿರ್ವಹಿಸಿ ಶುಕ್ರವಾರನಿವೃತ್ತಿ ಹೊಂದಿದಸಾರಿಗೆ ನಿಯಂತ್ರಕ ಚನ್ನಬಸಪ್ಪ ಮಹಾದೇವಪ್ಪ ಯಳಲಿ ವಿಭಿನ್ನವಾಗಿ ತಮ್ಮ ವೃತ್ತಿಗೆ ವಿದಾಯ ಹೇಳಿದರು.

ಕೊರೊನಾ ಸೋಂಕು ಹರಡುವುದನ್ನು ತಡೆಯಲು 400 ಮಾಸ್ಕ್‌ಗಳು ಹಾಗೂ 400ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿವಿಧ ಬಗೆಯ ಔಷಧೀಯ ಸಸಿಗಳನ್ನು ವಿತರಿಸಿದರು. ಯಳಲಿ ಅವರನ್ನುವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಹಾಗೂ ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ ಗೌರವಿಸಿದರು.

ಯಳಲಿ ಹಾಗೂ ಅವರ ಪುತ್ರ ರುದ್ರಪ್ಪ ಸೇರಿಕೊಂಡು ಮಾಸ್ಕ್‌ ಹಾಗೂಒಂದೆಲಗ (ಬ್ರಾಹ್ಮಿ), ದೊಡ್ಡಪತ್ರೆ, ರಾಮ ತುಳಸಿ, ಕೃಷ್ಣ ತುಳಸಿ, ಶಂಕರ ಪುಷ್ಟಿ, ಲೋಳೆಸರ, ಗರುಡ ಪಾತಾಳ, ಕಹಿಬೇವು ಹೀಗೆ 400 ಔಷಧ ಸಸ್ಯಗಳನ್ನು ನೀಡಿದ್ದು ವಿಶೇಷವಾಗಿತ್ತು.

ADVERTISEMENT

ಸೋಂಕಿನ ಭೀತಿಯಿಂದ ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಯಳಲಿ ಅವರು ಕೋವಿಡ್‌ 19 ಅಪಾಯದ ಸಮಯದಲ್ಲಿಯೂ ರಜೆ ಪಡೆಯದೆ ಕರ್ತವ್ಯ ನಿರ್ವಹಿಸಿದ್ದಾರೆ. ನಿವೃತ್ತಿಯ ದಿನದಂದು ಕೂಡ ಅರ್ಥಪೂರ್ಣ ಕೆಲಸ ಮಾಡಿದ್ದಾರೆ ಎಂದು ರಾಮನಗೌಡರ ಮೆಚ್ಚುಗೆ ವ್ಯಕ್ತಪಡಿಸಿದರು.ನಿಲ್ದಾಣದ ಅಧಿಕಾರಿಗಳಾದ ಕೋಟೂರ, ಪಿ.ಎಸ್. ಶೆಟ್ಟರ, ಸಾರಿಗೆ ನಿಯಂತ್ರಕರು ಪಾಲ್ಗೊಂಡಿದ್ದರು.

ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ಬಸ್‌:ರಾಜ್ಯದಲ್ಲಿ ಲಾಕ್‌ಡೌನ್‌ ಆದೇಶವನ್ನು ಸಂಪೂರ್ಣವಾಗಿ ತೆಗೆದು ಹಾಕಿದ್ದರಿಂದ ಆ. 1ರಿಂದ ಪೂರ್ಣಪ್ರಮಾಣದಲ್ಲಿ ಬಸ್‌ಗಳ ಸಂಚಾರ ಇರಲಿದೆ. ಈ ಮೊದಲು ವಾರದಲ್ಲಿ ಆರು ದಿನ ಸಂಚಾರಕ್ಕೆ ಅವಕಾಶವಿತ್ತು. ಈಗ ದಿನದ 24 ಗಂಟೆಯೂ ಬಸ್‌ಗಳ ಸಂಚಾರ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.