ADVERTISEMENT

ಹುಬ್ಬಳ್ಳಿ ಮೂರು ಸಾವಿರ ಮಠದಲ್ಲಿ ಗೊಂದಲ: ದಿಂಗಾಲೇಶ್ವರ ಭೇಟಿ ನಿರಾಕರಿಸಿದ ಮೂಜಗು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 11:26 IST
Last Updated 20 ಫೆಬ್ರುವರಿ 2020, 11:26 IST
ಹುಬ್ಬಳ್ಳಿ ಮೂರು ಸಾವಿರ ಮಠದಲ್ಲಿ ಮೂಜಗು ಭೇಟಿಗೆ ಕಾದು ಕುಳಿತ ದಿಂಗಾಲೇಶ್ವರ ಸ್ವಾಮೀಜಿ
ಹುಬ್ಬಳ್ಳಿ ಮೂರು ಸಾವಿರ ಮಠದಲ್ಲಿ ಮೂಜಗು ಭೇಟಿಗೆ ಕಾದು ಕುಳಿತ ದಿಂಗಾಲೇಶ್ವರ ಸ್ವಾಮೀಜಿ   

ಹುಬ್ಬಳ್ಳಿ: ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ (ಮೂಜಗು) ಭೇಟಿಗಾಗಿ ದಿಂಗಾಲೇಶ್ವರ‌ ಸ್ವಾಮೀಜಿ ಗುರುವಾರ ಮಧ್ಯಾಹ್ನದಿಂದಮಠದಲ್ಲಿ ಕಾದು ಕುಳಿತಿದ್ದಾರೆ.

ದಿಂಗಾಲೇಶ್ವರರನ್ನು ಭೇಟಿಯಾಗಲುಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿನಿರಾಕರಿಸಿದ್ದಾರೆ.ಇನ್ನೂ ಕೆಲಕಾಲ ಕಾಯುವುದಾಗಿ ದಿಂಗಾಲೇಶ್ವರರು ಹೇಳಿದ್ದಾರೆ.

‘ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರನ್ನು ಸ್ವತಂತ್ರವಾಗಿ ಬಿಡಬೇಕು. ನಮ್ಮನ್ನು ಭೇಟಿಯಾಗದಂತೆ ಅವರನ್ನು ತಡೆದವರು ಯಾರು ಎಂಬುದು ಬಹಿರಂಗವಾಗಬೇಕು’ ಎಂದು ದಿಂಗಾಲೇಶ್ವರ ಸ್ವಾಮೀಜಿ ಆಗ್ರಹಿಸಿದರು.

ADVERTISEMENT

ವಿವಾದಕ್ಕೆ ತೆರೆ ಎಳೆಯಬೇಕಾಗಿದೆ. ಯಾವುದೇ ಗದ್ದಲ ಇಲ್ಲ. ಭಕ್ತರು ಗೊಂದಲಕ್ಕೆ ಒಳಗಾಗಬಾರದು ಎಂದು ಅವರು ವಿನಂತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.