ಹುಬ್ಬಳ್ಳಿ: ಭಾರತದ ಸಂವಿಧಾನವು ಆಳುವ ಸರ್ಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ನಮ್ಮದು ವಿಶ್ವದಲ್ಲೇ ಅತ್ಯುತ್ತಮ ಸಂವಿಧಾನವಾಗಿದೆ ಎಂದು ಜೆಎಸ್ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲೆ ಡಾ.ವೀಣಾ ಟೊಣಪಿ ಹೇಳಿದರು.
ಜೆಎಸ್ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯ ಮತ್ತು ಜೆಎಸ್ಎಸ್ ಮಂಜುನಾಥೇಶ್ವರ ವಾಣಿಜ್ಯ ಮಹಾವಿದ್ಯಾಲಯ ಜಂಟಿಯಾಗಿ ಆಯೋಜಿಸಿದ್ದ ಭಾರತದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದರು. ಭಾರತದ ಸಂವಿಧಾನ ಮೇಧಾವಿಗಳ ಚಿಂತನಾ ಫಲವೆಂದು ತಿಳಿಸಿದರು.
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಾಗಿರಲಿ ಅದರಲ್ಲಿ ಭಾರತದ ಸಂವಿಧಾನ ಕುರಿತಾದ ಪ್ರಶ್ನೆಗಳು ಕಡ್ಡಾಯವಾಗಿ ಬರುತ್ತವೆ, ಹೀಗಾಗಿ ಇದರ ಸೂಕ್ತ ಅಧ್ಯಯನ ಅಗತ್ಯ. ಸಾಮಾಜಿಕ ಸಮಾನತೆ ಆಡಿಯಲ್ಲಿ ಎಲ್ಲರಿಗೂ ಸಮಾನ ಸ್ಥಾನಮಾನ ಮತ್ತು ಆವಕಾಶಗಳಿವೆ. ಸಂವಿಧಾನದ ಪ್ರಸ್ತಾವನೆ ರಚನಕಾರ ವಿಚಾರಧಾರೆಯ ಉದ್ದೇಶದ ಅನುಮೋದನೆಯ ಮೂಲವಾಗಿದೆ ಎಂದು ಹೇಳಿದರು.
ಪ್ರಾಂಶುಪಲೆ ಡಾ.ರೂಪಾ ಇಂಗಳಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಕ್ಕುಗಳನ್ನು ಪಡೆಯುವ ಹೋರಾಟದಲ್ಲಿ ಕರ್ತವ್ಯಗಳನ್ನು ಮರೆಯಬಾರದು ಎಂದರು. ಅರುಣಾ ಪ್ರಾರ್ಥಿಸಿದರು. ಪ್ರಿಯಾ, ಶಿಲ್ಪಾ ಸ್ವಾಗತಿಸಿದರು.
ಪೂರ್ಣಿಮಾ ಕುರಡಿಕೇರಿ ಅತಿಥಿಗಳನ್ನು ಪರಿಚಯಿಸಿದರು. ದೀಪಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಗೀತಾಂಜಲಿ ನಿರ್ವಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.