ADVERTISEMENT

ಕ್ರಿಕೆಟ್‌: ಎಚ್‌ಎಸ್‌ಸಿ ಜಯಭೇರಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2021, 14:21 IST
Last Updated 3 ನವೆಂಬರ್ 2021, 14:21 IST

ಹುಬ್ಬಳ್ಳಿ:ಆಯುಷ್‌ ಪಟೇಲ (63) ಅರ್ಧಶತಕದ ನೆರವಿನಿಂದಾಗಿ ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ ತಂಡ, ಲೀಲಾವತಿ ಪ್ಯಾಲೇಸ್‌ ಕಪ್‌ 14 ವರ್ಷದ ಒಳಗಿನವರ ಅಂತರ ಕ್ಯಾಂಪ್‌ಗಳ ಕ್ರಿಕೆಟ್‌ ಟೂರ್ನಿಯ ಬುಧವಾರದ ಪಂದ್ಯದಲ್ಲಿ ಒಂದು ವಿಕೆಟ್‌ನಿಂದ ಗೆಲುವು ಸಾಧಿಸಿತು.

ಚಾಂಪಿಯನ್ಸ್‌ ನೆಟ್‌ ಕ್ರಿಕೆಟ್‌ ಕೋಚಿಂಗ್‌ ಸೆಂಟರ್‌ ಆಯೋಜಿಸಿರುವ ಟೂರ್ನಿಯಲ್ಲಿ ಮೊದಲು ಬ್ಯಾಟ್‌ ಮಾಡಿದ ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌ 29.2 ಓವರ್‌ಗಳಲ್ಲಿ 112 ರನ್‌ ಗಳಿಸಿ ಆಲೌಟ್‌ ಆಯಿತು. ಎಚ್‌ಎಸ್‌ಸಿ ತಂಡದ ಹರ್ಷಿತ್‌ ಎಸ್‌. ಹಾಗೂ ವಿಕಾಸ ಪಿ. ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಈ ತಂಡ 29.2 ಓವರ್‌ಗಳಲ್ಲಿ ಗುರಿ ಮುಟ್ಟಿತು. ಆಯುಷ್‌ ಜೊತೆಗೆ ವಿಜಯ್ ಬಿ. (19) ತಂಡವನ್ನು ಗೆಲುವಿನ ದಡ ಸೇರಲು ನೆರವಾದರು. ಆಯುಷ್‌ ಪಂದ್ಯ ಶ್ರೇಷ್ಠ ಗೌರವ ಪಡೆದರು.

ದಿನದ ಇನ್ನೊಂದು ಪಂದ್ಯದಲ್ಲಿ ಶ್ರೀ ದುರ್ಗಾ ಸ್ಪೋರ್ಟ್ಸ್‌ ಅಕಾಡೆಮಿ ಒಂಬತ್ತು ವಿಕೆಟ್‌ಗಳ ಗೆಲುವು ಪಡೆಯಿತು. ಮೊದಲು ಬ್ಯಾಟ್‌ ಮಾಡಿದ ಧಾರವಾಡ ವಿಎಂಸಿಎ ತಂಡ 23.2 ಓವರ್‌ಗಳಲ್ಲಿ 74 ರನ್‌ ಗಳಿಸಿ ಆಲೌಟ್‌ ಆಗಿತ್ತು. ಈ ಗುರಿಯನ್ನು ದುರ್ಗಾ ಸ್ಪೋರ್ಟ್ಸ್‌ ತಂಡ 19.1 ಓವರ್‌ಗಳಲ್ಲಿ ತಲುಪಿತು. ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ ದುರ್ಗಾ ತಂಡದ ಪೃಥ್ವಿ ಕೆ. ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾದರು.

ADVERTISEMENT

ದೀಪಾವಳಿ ಹಬ್ಬದ ಅಂಗವಾಗಿ ಗುರುವಾರ ಹಾಗೂ ಶುಕ್ರವಾರ ಪಂದ್ಯಗಳು ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.