ADVERTISEMENT

ಹುಬ್ಬಳ್ಳಿ: ವೃದ್ಧನ ಕೊಂದು, ನಗ, ನಾಣ್ಯ ದೋಚಿದ ಡಕಾಯಿತರು

​ಪ್ರಜಾವಾಣಿ ವಾರ್ತೆ
Published 22 ಜನವರಿ 2019, 5:16 IST
Last Updated 22 ಜನವರಿ 2019, 5:16 IST
ತಡರಾತ್ರಿ ಹುಬ್ಬಳ್ಳಿಯ ರಾಜನಗರದಲ್ಲಿ ದರೋಡೆ ನಡೆದ‌ ಮನೆ.
ತಡರಾತ್ರಿ ಹುಬ್ಬಳ್ಳಿಯ ರಾಜನಗರದಲ್ಲಿ ದರೋಡೆ ನಡೆದ‌ ಮನೆ.    

ಹುಬ್ಬಳ್ಳಿ: ಇಲ್ಲಿ‌ನ ರಾಜನಗರದಲ್ಲಿ ಮನೆಗೆ ತಡರಾತ್ರಿ ನುಗ್ಗಿದ ಐವರು ಡಕಾಯಿತರು ವೃದ್ದ ದಂಪತಿಗೆ ಥಳಿಸಿ ₹11ಲಕ್ಷಕ್ಕೂ ಅಧಿಕ ಮೌಲ್ಯದ ‌ನಗ ನಾಣ್ಯ ದರೋಡೆ ಮಾಡಿದ್ದಾರೆ‌.

ದರೋಡೆಕೋರರ ಹೊಡೆತಕ್ಕೆ ವೆಂಕಣ್ಣ ಸೋಮಪ್ಪ ಬಣವಿ (72) ಆಸ್ಪತ್ರೆಗೆ ಸಾಗಿಸುವ ‌ಮಾರ್ಗದಲ್ಲಿ ಸಾವಿಗೀಡಾದರು. ಅವರ ಪತ್ನಿಯ ‌ತಲೆಗೂ ಏಟಾಗಿದೆ.

ಮನೆಯಲ್ಲಿ ಇಬ್ಬರೇ ವಾಸಿಸುತ್ತಿದ್ದರು ಎಂದು ಅಶೋಕ ನಗರ ಠಾಣೆ ‌ಪೊಲೀಸ್ ಇನ್ ಸ್ಪೆಕ್ಟರ್ ಜಗದೀಶ ಹಂಚಿನಾಳ ತಿಳಿಸಿದರು.

ADVERTISEMENT

ಬಣವಿ ಅವರ ಇಬ್ಬರು ಪುತ್ರರು ‌ಅಮೆರಿಕದಲ್ಲಿ, ಒಬ್ಬರು ಬೆಂಗಳೂರಿನಲ್ಲಿ ವಾಸಿಸುತ್ತಾರೆ.

ದರೋಡೆಕೋರರು ವೃದ್ದ ದಂಪತಿಯ ಕೈ, ಕಾಲು, ಬಾಯಿಗೆ ಕಟ್ಟಿ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ಬಣವಿ ಅವರ ‌ಪತ್ನಿ ವನಮಾಲಾ ಅವರಿಗೂ ಏಟು ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.