ಧಾರವಾಡ: ತಾಲ್ಲೂಕಿನ ನರೇಂದ್ರ ಗ್ರಾಮದ ಮಳೆಪ್ಪಜ್ಜ ಹಾಗೂ ಮೌನಯೋಗಿ ಮಹಾಂತ ಶಿವಯೋಗಿಯವರ 67 ನೇ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು.
ಮಧ್ಯಾಹ್ನ ಗ್ರಾಮದೇವಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಬಳಿಕ ರಥೋತ್ಸವ ಜರುಗಿತು. ಉಪ್ಪಿನ ಬೆಟಗೇರಿಯ ಕುಮಾರ ವಿರುಪಾಕ್ಷ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಭಕ್ತರು ಬಾಳೆಹಣ್ಣು, ಕೊಬ್ಬರಿ, ಉತ್ತತ್ತಿ ಮುಂತಾದವುಗಳನ್ನು ರಥಕ್ಕೆ ಎಸೆದು ನಮಿಸಿದರು.
ಸಂಗಮೇಶ ಸ್ವಾಮೀಜಿ, ಮಳೆಪ್ಪಜ್ಜನ ಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂದ್ರಗೌಡ ಪಾಟೀಲ, ನಾಗೇಶ ಹಟ್ಟಿಹೊಳಿ, ಚೆನ್ನವೀರಗೌಡ ಪಾಟೀಲ, ಬಸವರಾಜ ವೆಂಕಟಾಪೂರ, ಮಂಜುನಾಥ ತಿರ್ಲಾಪೂರ, ಶಂಕರ ಈಳಿಗೇರ, ಬಸವಪ್ರಭು ಹುಂಬೇರಿ, ಬಾಬು ಮುತಾಲಿಕ ದೇಸಾಯಿ, ಈಶ್ವರ ಗಾಣಿಗೇರ, ಈರಪ್ಪ ಗಂಟಿ, ಚನಮಲ್ಲಪ್ಪ ಮೊರಬ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.