ADVERTISEMENT

ಪ್ಲಾಟ್‌ ನೀಡದ ಸತಾಯಿಸಿದ ಪ್ರಕರಣ: ಬಡ್ಡಿಸಮೇತ ಹಣ ವಾಪಸ್‌ಗೆ ಕೋರ್ಟ್ ಆದೇಶ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 12:58 IST
Last Updated 9 ಜೂನ್ 2025, 12:58 IST
ಕೋರ್ಟ್ ತೀರ್ಪು
ಕೋರ್ಟ್ ತೀರ್ಪು   

ಧಾರವಾಡ: ಮುಂಗಡ ಹಣ ಪಡೆದು ಖರೀದಿದಾರಗೆ ನಿವೇಶನ (ಪ್ಲಾಟ್‌) ನೀಡದ ಪ್ರಕರಣದಲ್ಲಿ ಸಾಮನ್ ಡೆವಲಪರ್ಸ್‌ನ ಮಾಲೀಕ ವಿನಯ ಸಾಹುಕಾರಗೆ ಜಿಲ್ಲಾ ಗ್ರಾಹಕರ ಕೋರ್ಟ್‌ ದಂಡ ವಿಧಿಸಿದೆ. ಬಡ್ಡಿಸಮೇತ ಹಣವನ್ನು ಖರೀದಿದಾರಗೆ ವಾಪಸ್‌ ನೀಡಲು ಆದೇಶಿಸಿದೆ.

ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ಅವರು ಈ ಆದೇಶ ನೀಡಿದ್ದಾರೆ. ₹50 ಸಾವಿರ ಪರಿಹಾರ, ₹10 ಸಾವಿರ ಪ್ರಕರಣದ ವೆಚ್ಚ ಹಾಗೂ ಮುಂಗಡ ಪಡೆದಿದ್ದ ₹6 ಲಕ್ಷಕ್ಕೆ (2011 ಆಗಸ್ಟ್‌ 19ರಿಂದ) ವಾರ್ಷಿಕ ಶೇ 12 ಬಡ್ಡಿ ಲೆಕ್ಕ ಹಾಕಿ ಖರೀದಾರರಿಗೆ ಸಂದಾಯ ಮಾಡುವಂತೆ ಆದೇಶಿಸಿದ್ದಾರೆ.

ಏನಿದು ಪ್ರಕರಣ?: ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಎತ್ತಿನ ಹಳ್ಳಿಯ ನೇತಾಜಿ ಅವರು 2011ರಲ್ಲಿ ಧಾರವಾಡದಲ್ಲಿ ವಾಸ ಇದ್ದಾಗ ಸಾಮನ್ ಡೆವಲಪರ್ಸ್‌ನಿಂದ ಪ್ಲಾಟ್‌ ಅನ್ನು ₹10.37 ಲಕ್ಷಕ್ಕೆ ಖರೀದಿಸಿ ₹6 ಲಕ್ಷ ಮುಂಗಡ ಪಾವತಿಸಿದ್ದರು.

ADVERTISEMENT

ಡೆವಲಪರ್ಸ್‌ ಮಾಲೀಕ ‘ಲೇ ಔಟ್‌’ ನಿರ್ಮಾಣ ಮಾಡಲಿಲ್ಲ. ನೇತಾಜಿ ಅವರಿಗೆ ನಿವೇಶವನ್ನೂ ನೀಡದೆ, ಹಣವನ್ನು ವಾಪಸ್‌ ನೀಡದೆ ಸತಾಯಿಸಿದ್ದರು. ನೇತಾಜಿ ಅವರು ಸಾಮನ್ ಡೆವಲಪರ್ಸ್‌ ಮಾಲೀಕನ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಮಾರ್ಚ್‌ 7ರಂದು ದೂರು ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.