ADVERTISEMENT

ಧಾರವಾಡ | ಸಂವಿಧಾನದ ತತ್ವ ಪಾಲಿಸಲು ಜೀವಂಧರ ಕುಮಾರ್ ಸಲಹೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 6:46 IST
Last Updated 27 ಜನವರಿ 2026, 6:46 IST
ಧಾರವಾಡದ ಎಸ್‍ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವದ  ಧ್ವಜಾರೋಹಣದಲ್ಲಿ ಗಣ್ಯರು ಪಾಲ್ಗೊಂಡಿದ್ದರು
ಧಾರವಾಡದ ಎಸ್‍ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವದ  ಧ್ವಜಾರೋಹಣದಲ್ಲಿ ಗಣ್ಯರು ಪಾಲ್ಗೊಂಡಿದ್ದರು   

ಧಾರವಾಡ: ‘ಗಣರಾಜ್ಯೋತ್ಸವವು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ನಾಗರಿಕರ ಜವಾಬ್ದಾರಿಯನ್ನು ನೆನಪಿಸುವ ದಿನವಾಗಿದೆ’ ಎಂದು ಎಸ್‍ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಜೀವಂಧರ ಕುಮಾರ್ ಹೇಳಿದರು.

ನಗರದ ಎಸ್‍ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವ ಮಾತನಾಡಿದರು.

‘ದೇಶದ ಸಂವಿಧಾನವನ್ನು  ಎಲ್ಲರೂ ಗೌರವಿಸಬೇಕು. ಅದರ ತತ್ವಗಳನ್ನು ಪಾಲಿಸಬೇಕು. ಮಾನವೀಯ ಮೌಲ್ಯಗಳಿರುವ ಸಮರ್ಥರನ್ನು ಸಜ್ಜುಗೊಳಿಸುವುದು ಇಂದಿನ ಅಗತ್ಯ’ ಎಂದರು.

ADVERTISEMENT

ಬ್ರಿಗೇಡಿಯರ್ ಸುಧೀಂದ್ರ ಇಟ್ನಾಳ್ ಮಾತನಾಡಿ, ‘ದೇಶದ ವೈವಿಧ್ಯತೆ ಗೌರವಿಸಿ, ರಾಷ್ಟ್ರದ ಸಮಗ್ರತೆ ಕಾಪಾಡುವ ಬದ್ಧತೆ ಇರಬೇಕು’ ಎಂದು ತಿಳಿಸಿದರು.

ಪ್ರಾಚಾರ್ಯ ರಮೇಶ ಚಕ್ರಸಾಲಿ, ಎಸ್.ಎಸ್. ಕೆರೂರ್, ಪ್ರೊ. ಭಾನುಪ್ರಿಯಾ ನಾಗ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.