ADVERTISEMENT

ಗೋಕುಲ: ಜಾತ್ರಾ ಕಾರ್ಯಕ್ರಮಗಳು ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 3:01 IST
Last Updated 8 ಏಪ್ರಿಲ್ 2022, 3:01 IST

ಹುಬ್ಬಳ್ಳಿ: ಗೋಕುಲ ಗ್ರಾಮದ ಹನುಮಾನ ದೇವಸ್ಥಾನದ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದ ಅಂಗವಾಗಿ ಏಪ್ರಿಲ್‌ 8ರಿಂದ 16ರ ವರೆಗೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಏಪ್ರಿಲ್‌ 8ರಿಂದ 15ರ ವರೆಗೆ ಪ್ರತಿದಿನ ಸಂಜೆ 7.30ಕ್ಕೆ ನಿಂಗಪ್ಪ ಮ್ಯಾಗೇರಿ ಅವರು ದೇವಸ್ಥಾನದಲ್ಲಿ ‘ಸುಂದರಕಾಂಡ ರಾಮಾಯಣ’ ಪ್ರವಚನ ನಡೆಸಿಕೊಡಲಿದ್ದು, ನಂತರ ಅನ್ನಪ್ರಸಾದ ನಡೆಯಲಿದೆ. ಏಪ್ರಿಲ್‌ 15ರ ರಾತ್ರಿ 10ಕ್ಕೆ ಗೋಕುಲ ಗ್ರಾಮದ ಎಲ್ಲ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮಗಳು ನಡೆಯಲಿವೆ.

ಏಪ್ರಿಲ್‌ 16ರ ಬೆಳಿಗ್ಗೆ 4ಕ್ಕೆ ದೇವರ ಮೂರ್ತಿಗೆ ಅಭಿಷೇಕ, 7ಕ್ಕೆ ಮಹಾಮಂಗಳಾರತಿ, 9ಕ್ಕೆ ಹನುಮಂತ ದೇವರ ತೊಟ್ಟಿಲೋತ್ಸವ, ಪ್ರವಚನ, ಮಂಗಳ ಕಾರ್ಯಕ್ರಮಗಳು ನಡೆಯಲಿವೆ. ನಂತರ ಸಂಜೆ 5ಕ್ಕೆ ರಥೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.