ADVERTISEMENT

3 ಸಾವಿರ ಲೈನ್‌ಮನ್‌ ನೇಮಕಾತಿ ಶೀಘ್ರ ಪೂರ್ಣ: ಕೆ.ಜೆ.ಜಾರ್ಜ್‌

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 14:29 IST
Last Updated 9 ಸೆಪ್ಟೆಂಬರ್ 2025, 14:29 IST
<div class="paragraphs"><p>ಕೆ.ಜೆ.ಜಾರ್ಜ್‌</p></div>

ಕೆ.ಜೆ.ಜಾರ್ಜ್‌

   

ಧಾರವಾಡ: ಮೂರು ಸಾವಿರ ಲೈನ್‌ಮನ್‌ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಲ್ಲ ವಿದ್ಯುತ್‌ ಕಂಪನಿಗಳಿಗೂ (ಮೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಸೆಸ್ಕ್‌..) ಲೈನ್‌ಮನ್‌ಗಳನ್ನು ಒದಗಿಸಲಾಗುವುದು. ನೇಮಕವಾದವರು 10 ವರ್ಷ ಒಂದೇ ಕಂಪನಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ನಿಯಮ ರೂಪಿಸಲಾಗಿದೆ’ ಎಂದರು.

ADVERTISEMENT

‘ಶರಾವತಿ ವಿದ್ಯುತ್‌ ಘಟಕದಲ್ಲಿ ‘ಪಂಪ್‌ ಸ್ಟೊರೇಜ್‌’ ವ್ಯವಸ್ಥೆಗೆ ಉದ್ದೇಶಿಸಲಾಗಿದೆ. ಇದನ್ನು ಸ್ಥಾಪಿಸಲು 52 ಹೆಕ್ಟೇರ್‌ ಜಾಗ ಬೇಕು. ಪಂಪ್‌ ಸ್ಟೊರೇಜ್‌ನಿಂದ ಎರಡು ಸಾವಿರ ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಹೆಚ್ಚಲಿದೆ’ ಎಂದು ತಿಳಿಸಿದರು.

‘ಸಿಸಿ’ (ಕಟ್ಟಡ ನಿರ್ಮಾಣ ಅನುಮತಿ ಪತ್ರ) ಹಾಗೂ ‘ಒಸಿ’ (ಕಟ್ಟಡ ಸ್ವಾಧೀನಾನುಭವ ಪತ್ರ) ಇಲ್ಲದ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಸಂಪುಟ ಸಭೆ ನಿರ್ಧಾರ ಕೈಗೊಳ್ಳಲಿದೆ. ‘ಒಸಿ’, ‘ಸಿಸಿ’ ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕದ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಗಿದೆ. ಸಂಪುಟದಲ್ಲಿ ಕೈಗೊಳ್ಳುವ ನಿರ್ಧಾರದಂತೆ ಇಲಾಖೆ ಕ್ರಮ ವಹಿಸಲಿದೆ‘ ಎಂದರು.

‘ಕಟ್ಟಡಕ್ಕೆ ತಾತ್ಕಾಲಿಕ ವಿದ್ಯುತ್‌ ಸಂಪರ್ಕಕ್ಕೆ ‘ಸಿಸಿ’ (ಕಟ್ಟಡ ನಿರ್ಮಾಣ ಅನುಮತಿ ಪತ್ರ) ಹಾಗೂ ಶಾಶ್ವತ ಸಂಪರ್ಕಕ್ಕೆ ‘ಒಸಿ’ ಶಾಶ್ವತ ಸಂಪರ್ಕಕ್ಕೆ (ಒಸಿ) ಇರಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ‘ಒಸಿ’, ‘ಸಿಸಿ’ ಇಲ್ಲದವರಿಗೆ ಸಂಪರ್ಕ ನೀಡದಂತೆ ಮುಖ್ಯಕಾರ್ಯದರ್ಶಿ ಇಂಧನ ಇಲಾಖೆಗೆ ಸೂಚನೆ ನೀಡಿದ್ದಾರೆ’ ಎಂದರು.

‘ರಾಷ್ಟ್ರೀಯ ವಿದ್ಯುತ್‌ ‘ಗ್ರೀಡ್‌’ ಬಹಳ ಮುಖ್ಯವಾದುದು. ಈ ಗ್ರಿಡ್‌ ಮೂಲಕ ಪಂಜಾಬ್‌, ಉತ್ತರ ಪ್ರದೇಶಗಳಿಂದ ಈ ಭಾಗಕ್ಕೆ ವಿದ್ಯುತ್‌ ಪೂರೈಸಲಾಗುತ್ತದೆ. ‘ತಮ್ನಾರ್‌ ವಿದ್ಯುತ್‌ ಯೋಜನೆಗೆ ತಡೆ ಮಾಡುವುದು ಸರಿಯಲ್ಲ. ಮಹಾದಾಯಿ ಯೋಜನೆಗಾಗಿ ಒತ್ತಡವನ್ನು ಹೇರುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.