ADVERTISEMENT

ಕುಂದಗೋಳ | ನಾಲೆ ಒಡೆದು ಅಪಾರ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 6:26 IST
Last Updated 11 ಅಕ್ಟೋಬರ್ 2025, 6:26 IST
ಕುಂದಗೋಳ ತಾಲ್ಲೂಕಿನ ಗುಡೇನಕಟ್ಟಿ ಗ್ರಾಮದ ಹೊಲಗಳಿಗೆ ನೀರು ನುಗ್ಗಿ, ಬದು ಒಡೆದಿರುವುದು
ಕುಂದಗೋಳ ತಾಲ್ಲೂಕಿನ ಗುಡೇನಕಟ್ಟಿ ಗ್ರಾಮದ ಹೊಲಗಳಿಗೆ ನೀರು ನುಗ್ಗಿ, ಬದು ಒಡೆದಿರುವುದು   

ಕುಂದಗೋಳ: ತಾಲ್ಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಹಲವು ರೈತರ ಜಮೀನುಗಳಲ್ಲಿ ನೀರು ನಿಂತಿದ್ದು, ಕೆಲವೆಡೆ ಹೊಲದ ಬದು ಒಡೆದು ಅಪಾರ ನಷ್ಟ ಉಂಟಾಗಿದೆ.

ಹಳ್ಳಗಳು ತುಂಬಿ ಹರಿಯುತ್ತಿದ್ದು, ಕೆರೆಗಳು ತುಂಬಿ ಕೋಡಿ ಬಿದ್ದಿವೆ. ತಾಲ್ಲೂಕಿನ ಗುಡೇನಕಟ್ಟಿ, ಕೂಬಿಹಾಳ, ಗುಡಗೇರಿ, ಶಿರೂರ ಸೇರಿದಂತೆ ಬಹುತೇಕ ಗ್ರಾಮದ‌ ರೈತರ ಹೊಲಗಳಿಗೆ ನೀರು ನುಗ್ಗಿದೆ.

ಪಟ್ಟಣದ ಕೆರೆ ಸಂಪೂರ್ಣ ಭರ್ತಿಯಾಗಿದೆ. ಬೆಣ್ಣಿಹಳ್ಳ, ಗೂಗಿಹಳ್ಳ ಸೇರಿದಂತೆ ಅನೇಕ ಹಳ್ಳಗಳು ಮೈದುಂಬಿ ಹರಿಯುತ್ತಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.