ಧಾರವಾಡ: ಕಳೆದ ಕೆಲವು ದಿನಗಳಿಂದ ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕಡೆಗೆ ತಾಲ್ಲೂಕಿನ ಕವಲಗೇರಿಯಲ್ಲಿ ಭಾನುವಾರ ನಸುಕಿನಲ್ಲಿ ಸೆರೆಯಾಗಿದೆ.
4ರಿಂದ 5 ವರ್ಷದ ಗಂಡು ಚಿರತೆ ಇದಾಗಿದ್ದು, ಗ್ರಾಮದ ಉಪ್ಪಾರ ಎಂಬುವವರ ಕಬ್ಬಿನ ತೋಟದಲ್ಲಿ ಇದು ಆಶ್ರಯ ಪಡೆದಿತ್ತು. ಶುಕ್ರವಾರ ಗೋವನಕೊಪ್ಪಕ್ಕೆ ಸ್ಥಳಾಂತರ ಗೊಂಡಿದ್ದ ಚಿರತೆ ಮತ್ತೆ ಕವಲಗೇರಿಗೆ ಮರಳಿತ್ತು. ಕಬ್ಬಿನ ಗದ್ದೆಯಲ್ಲಿರುವ ಖಚಿತ ಮಾಹಿತಿ ಮೇರೆಗೆ ಬೋನು ಅಳವಡಿಸಲಾಗಿತ್ತು.
ನಸುಕಿನಲ್ಲಿ ಬೋನಿಗೆ ಬಿದ್ದ ಚಿರತೆಯನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಲಾಗಿದೆ. ಚಿರತೆಗೆ ಗಾಯವಾಗದೆ ಆರೋಗ್ಯವಾಗಿದ್ದರೆ ಕಾಡಿಗೆ ಬಿಡಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.