ಹುಬ್ಬಳ್ಳಿ: ಯುದ್ಧಪೀಡಿತ ಉಕ್ರೇನ್ನಿಂದ ಭಾರತಕ್ಕೆ ಸುರಕ್ಷಿತವಾಗಿ ಮರಳಿದ ವೈದ್ಯಕೀಯ ವಿದ್ಯಾರ್ಥಿನಿ ನಾಜಿಲ್ಲಾ ಘಾಜಿಪುರ್ ಅವರ, ಶಾಂತಿನಗರದಲ್ಲಿರುವ ಮನೆಗೆ ಭಾನುವಾರ ಶಾಸಕ ಜಗದೀಶ ಶೆಟ್ಟರ್ ಅವರು ಭೇಟಿ ನೀಡಿ, ಕುಶಲೋಪರಿ ವಿಚಾರಿಸಿದರು.
ನಾಜಿಲ್ಲಾ ಅವರನ್ನು ಸನ್ಮಾನಿಸಿದ ಶೆಟ್ಟರ್, ಯುದ್ಧದಿಂದ ಸಂಕಷ್ಟಕ್ಕೆ ಸಿಲುಕಿದರೂ ಧೃತಿಗೆಡದೆ ಉಕ್ರೇನ್ ಗಡಿ ದಾಟಿ, ದೇಶಕ್ಕೆ ವಾಪಾಸ್ಸಾದ ವಿದ್ಯಾರ್ಥಿನಿಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಹಾನಗರ ಪಾಲಿಕೆ ಸದಸ್ಯ ಮಹಾದೇವಪ್ಪ ನರಗುಂದ, ನಾಶಿರ ತಂಬೂರಿ, ಪಟೇಲಸಾಬ್ ಮುಲ್ಲಾ (ಖಲಂದರ್), ಯುನುಸ್, ಕಾಸೀಂ, ಇಮಾಮ್ ಹುಸೇನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.