ಹುಬ್ಬಳ್ಳಿ: ಇಲ್ಲಿನ ಅಯೋಧ್ಯಾನಗರದಲ್ಲಿ ನಡೆದ ಪುಟ್ಟ ಮಕ್ಕಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ತಾಯಿ ಚೈತ್ರಾ ಹುಲಕೋಟಿ ಹಾಗೂ ಆಕೆಯ ಪ್ರಿಯಕರ ಹಳೇ ಹುಬ್ಬಳ್ಳಿಯ ಈರಣ್ಣ ಗಂಗಾವತಿ ಎಂಬಾತನನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ಮಧ್ಯೆ ಇದ್ದ ಸಂಬಂಧವೇ ಈ ಕೊಲೆಗೆ ಕಾರಣ. ಮಕ್ಕಳು ಈ ವಿಷಯವನ್ನು ತಂದೆಗೆ ತಿಳಿಸಬಹುದು ಎಂದು ಕೊಲೆ ಮಾಡಿದ್ದಾರೆ. ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದ ಈರಣ್ಣ ಜಾತಿ, ಆದಾಯ ಪ್ರಮಾಣ ಪತ್ರ ಮಾಡಿಸಿಕೊಡುತ್ತಿದ್ದ. ಮಗನನ್ನು ಶಾಲೆಗೆ ಸೇರಿಸುವ ಸಂದರ್ಭದಲ್ಲಿ ಚೈತ್ರಾ ಆದಾಯ ಪ್ರಮಾಣ ಪತ್ರ ಮಾಡಿಸಲು ಹೋದಾಗ ಆತನ ಪರಿಚಯವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯ ಡಿಸೆಂಬರ್ 27ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಐದು ವರ್ಷದ ರೋಹಿತ್ ಮತ್ತು ನಾಲ್ಕು ವರ್ಷದ ರೋಹಿಣಿಯನ್ನು ವೇಲ್ನಿಂದ ಬಿಗಿದು ಕೊಲೆ ಮಾಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.