ADVERTISEMENT

ಧಾರವಾಡ: ಚರಂಡಿ ಭಾಗದಲ್ಲಿ ನವಜಾತ ಶಿಶು ಪತ್ತೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 1:44 IST
Last Updated 19 ಜುಲೈ 2023, 1:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಧಾರವಾಡ: ನಗರದ ರೋಣಪುರದ ಹನುಮಂತ ದೇಗುಲ ಸಮೀಪದ ರಸ್ತೆ ಬದಿ ಚರಂಡಿ ಭಾಗದಲ್ಲಿ ಮಂಗಳವಾರ ನವಜಾತ ಶಿಶು ಸಿಕ್ಕಿದ್ದು, ಸಾರ್ವಜನಿಕರು ಶಿಶುವನ್ನು ಜಿಲ್ಲಾಸ್ಪತ್ರೆಗೆ ಒಯ್ದಿದ್ದಾರೆ.

ಗಟಾರ ಭಾಗದಲ್ಲಿ ಶಿಶು ಇರುವುದನ್ನು ಪಾದಚಾರಿಗಳು ನೋಡಿದ್ದಾರೆ. ತಕ್ಷಣವೇ ಅಲ್ಲಿಂದ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

‘ಮಕ್ಕಳ ವಿಭಾಗದಲ್ಲಿ ಶಿಶುವನ್ನು ದಾಖಲಿಸಲಾಗಿದೆ. ಶಿಶುವನ್ನು ಚರಂಡಿ ಭಾಗದಲ್ಲಿ ಇಟ್ಟುಹೋಗಿದ್ದು ಯಾರು ಎಂಬುದು ಗೊತ್ತಾಗಿಲ್ಲ. ಸ್ಥಳ ಪರಿಶೀಲನೆ ನಡೆಸಿದ್ದೇವೆ. ಪತ್ತೆ ನಿಟ್ಟಿನಲ್ಲಿ ಕಾರ್ಯಾಚರಣೆ ಆರಂಭಿಸಿದ್ದೇವೆ’ ಎಂದು ಸಬ್‌ ಅರ್ಬನ್‌ ಠಾಣೆ ಪೊಲೀಸರು ತಿಳಿಸಿದ್ದಾರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.