ಹುಬ್ಬಳ್ಳಿ: ಶಿವಗಿರಿ ಕಾಲೊನಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಸತಿ ಸಮುಚ್ಚಯದಲ್ಲಿನ ಲಿಫ್ಟ್ ಕೆಲಸ ನೀಡುವುದಾಗಿ ಅಯೋಧ್ಯಾ ನಗರದ ಫರ್ವೇಜ್ ಬಳಗಾನೂರು ಎಂಬಾತ ಶಕ್ತಿ ಕಾಲೊನಿಯ ಸದಾನಂದ ಜಮಖಂಡಿ ಅವರಿಂದ ₹3.50 ಲಕ್ಷ ಮೊತ್ತದ ಚೆಕ್ ಪಡೆದು ವಂಚಿಸಿದ್ದಾನೆ. ಒಂದು ವರ್ಷದಿಂದ ಕೆಲಸವನ್ನೂ ನೀಡದೆ, ಹಣವನ್ನು ಮರಳಿಸದೆ ವಂಚಿಸಿರುವ ಆರೋಪದ ಮೇಲೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನಾಭರಣ ಕಳವು: ಹಳೇ ಹುಬ್ಬಳ್ಳಿಯ ಆನಂದನಗರದ ಚಿದಂಬರ ಲಕ್ಕಣ್ಣವರ ಅವರ ಮನೆ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ₹60 ಸಾವಿರ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.