ADVERTISEMENT

ಮಾಜಿ ಮುಖ್ಯಮಂತ್ರಿಗಳು ಜನರಿಗೆ ಸ್ಪಷ್ಟೀಕರಣ ನೀಡಲಿ: ಪ್ರಹ್ಲಾದ ಜೋಶಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 21:30 IST
Last Updated 20 ಫೆಬ್ರುವರಿ 2021, 21:30 IST
ಇಸ್ಕಾನ್ ದೇವಸ್ಥಾನದ ಆವರಣದಲ್ಲಿ ಕೃಷ್ಣ–ಬಲರಾಮನ ರಥಯಾತ್ರೆ ಶನಿವಾರ ನಡೆಯಿತು
ಇಸ್ಕಾನ್ ದೇವಸ್ಥಾನದ ಆವರಣದಲ್ಲಿ ಕೃಷ್ಣ–ಬಲರಾಮನ ರಥಯಾತ್ರೆ ಶನಿವಾರ ನಡೆಯಿತು   

ಧಾರವಾಡ: ‘ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಹೆಸರುಗಳು ಕೇಳಿ ಬಂದಿದ್ದು, ಇಬ್ಬರೂ ರಾಜ್ಯದ ಜನತೆಗೆ ಇದರ ಬಗ್ಗೆ ಸ್ಪಷ್ಟೀಕರಣ ನೀಡಬೇಕು’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಹೆಸರನ್ನು ಉಲ್ಲೇಖಿಸದೆ ‘ಇವರಿಬ್ಬರೂ ರಾಜಕೀಯದಲ್ಲಿ ದೊಡ್ಡ ಸ್ಥಾನ ಅಲಂಕರಿಸಿದ್ದು, ಈಗ ಇವರ ಹೆಸರುಗಳನ್ನು ಐಎಂಎ ನಿರ್ದೇಶಕ ತನಿಖೆ ವೇಳೆ ಹೇಳಿರುವುದಾಗಿತಿಳಿದು ಬಂದಿದೆ. ಈ ತನಿಖೆ ತಾರ್ಕಿಕ ಅಂತ್ಯಕ್ಕೆ ಬರಬೇಕು ಹಾಗೂ ಬಡ ಜನರಿಗೆ ನ್ಯಾಯ ಸಿಗಬೇಕು. ಇಬ್ಬರು ರಾಜಕಾರಣಿಗಳು ಕರ್ನಾಟಕದ ಜನತೆಗೆ ಐಎಂಎ ನಿರ್ದೇಶಕನ ಹೇಳಿಕೆಗೆ ಉತ್ತರ ನೀಡಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT