ADVERTISEMENT

ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 16:25 IST
Last Updated 29 ಜೂನ್ 2025, 16:25 IST

ಹುಬ್ಬಳ್ಳಿ: ತಾಲ್ಲೂಕಿನ ಶಿರಗುಪ್ಪಿಯ ನೆಹರೂ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಪೂರ್ವ ಮತ್ತು ಗುರುಪಾದೇಶ್ವರ ಶಿಕ್ಷಣ ಟ್ರಸ್ಟ್ ವತಿಯಿಂದ ಅಳವಡಿಸಲಾಗಿರುವ ಶುದ್ಧ ನೀರಿನ ಘಟಕವನ್ನು ಶನಿವಾರ ಉದ್ಘಾಟಿಸಲಾಯಿತು.

ಕ್ಲಬ್‌ನ ಜಿಲ್ಲಾ ಗವರ್ನರ್ ಬಾಜಿಲ್ ಡಿಸೊಜಾ ಮಾತನಾಡಿ, ನೀರು ಅಮೂಲ್ಯ ಸಂಪತ್ತು. ನೀರನ್ನು ವ್ಯರ್ಥ ಮಾಡಬಾರದು. ಶುದ್ಧ ಕುಡಿಯುವ ನೀರಿನ ಘಟಕದಿಂದ 500 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

ಗುರುಪಾದೇಶ್ವರ ಶಿಕ್ಷಣ ಟ್ರಸ್ಟ್‌ ಚೇರ್ಮನ್ ಎನ್‌.ಎನ್‌.ಕಂಪ್ಲಿ, ಕಾರ್ಯದರ್ಶಿ ಎಸ್‌.ಜಿ.ಮೆಣಸಿನಕಾಯಿ, ಕ್ಲಬ್ ಅಧ್ಯಕ್ಷ ಪ್ರಭು ಲಿಗಾಡಿ, ಕಾರ್ಯದರ್ಶಿ ರಾಹುಲ್ ನಾಗಮುಳೆ, ನಿರ್ಮಲಾ ಚವಡಶೆಟ್ಟಿ, ಐ.ವಿ.ಕಾಳೆ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.