ADVERTISEMENT

ಮಠಗಳಿಂದ ಸಮಾಜ ಸುಧಾರಣೆ

ಹೊಸಮಠ: ದಸರಾ ಮಹೋತ್ಸವದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 15:38 IST
Last Updated 8 ಅಕ್ಟೋಬರ್ 2019, 15:38 IST
ಹುಬ್ಬಳ್ಳಿಯ ಹೊಸಮಠದಲ್ಲಿ ಆಯೋಜಿಸಿರುವ ‘ಹುಬ್ಬಳ್ಳಿ ದಸರಾ ಮಹೋತ್ಸವ- 2019’ ಕಾರ್ಯಕ್ರಮವನ್ನು ಶಾಸಕ ಪ್ರಸಾದ ಅಬ್ಬಯ್ಯ ಉದ್ಘಾಟಿಸಿದರು. ಹೊಸಮಠದ ಚಂದ್ರಶೇಖರ ಶಿವಯೋಗಿ ರಾಜಯೋಗೀಂದ್ರ ಸ್ವಾಮೀಜಿ ಇದ್ದಾರೆ
ಹುಬ್ಬಳ್ಳಿಯ ಹೊಸಮಠದಲ್ಲಿ ಆಯೋಜಿಸಿರುವ ‘ಹುಬ್ಬಳ್ಳಿ ದಸರಾ ಮಹೋತ್ಸವ- 2019’ ಕಾರ್ಯಕ್ರಮವನ್ನು ಶಾಸಕ ಪ್ರಸಾದ ಅಬ್ಬಯ್ಯ ಉದ್ಘಾಟಿಸಿದರು. ಹೊಸಮಠದ ಚಂದ್ರಶೇಖರ ಶಿವಯೋಗಿ ರಾಜಯೋಗೀಂದ್ರ ಸ್ವಾಮೀಜಿ ಇದ್ದಾರೆ   

ಹುಬ್ಬಳ್ಳಿ: ‘ಮಠಗಳು ಸಮಾಜದ ಅಂಧಕಾರ ತೊಡೆದು ಜ್ಞಾನದ ಬೆಳಕು ನೀಡಿ, ಸರಿಯಾದ ದಿಕ್ಕಿನಲ್ಲಿ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ತಿಳಿಸಿದರು.

ನಗರದ ಅಕ್ಕಿಹೊಂಡದಲ್ಲಿರುವ ಹೊಸಮಠದಲ್ಲಿ ಜಗದ್ಗುರು ಬೃಹನ್ ಹೊಸಮಠ ದಸರಾ ಮಹೋತ್ಸವ ಸಮಿತಿ ಆಯೋಜಿಸಿರುವ ‘ಹುಬ್ಬಳ್ಳಿ ದಸರಾ ಮಹೋತ್ಸವ- 2019’ರಲ್ಲಿ ಮಾತನಾಡಿದ ಅವರು, ‘ಸರ್ಕಾರಗಳೂ ಮಾಡಲಾಗದಂತಹ ಮಹಾನ್ ಕಾರ್ಯಗಳನ್ನು ನಾಡಿನ ಅನೇಕ ಮಠಗಳು ಮಾಡಿವೆ’ ಎಂದರು.

‘ಸಾಧು-ಸಂತರು ಹಾಗೂ ಧರ್ಮ ಗುರುಗಳ ಮಾರ್ಗದರ್ಶದಲ್ಲಿ ಈ ದೇಶವನ್ನು ಕಟ್ಟಲಾಗಿದೆ. ಮಠಗಳ ಧಾರ್ಮಿಕ ಪರಂಪರೆ ಹಾಗೂ ಸಂಸ್ಕತಿಯನ್ನು ನಾವೆಲ್ಲರೂ ಉಳಿಸಿ ಬೆಳೆಸಬೇಕಿದೆ. ಮೈಸೂರು ದಸರಾ ಉತ್ಸವದಲ್ಲಿ ಭಾಗವಹಿಸಲಾಗದ ಉತ್ತರ ಕರ್ನಾಟಕ ಭಾಗದ ಅನೇಕ ಕಲಾವಿದರಿಗೆ ಅವಳಿನಗರದ ವಿವಿಧ ದಸರಾ ಉತ್ಸವ ಸಮಿತಿಗಳು 9 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಕಲಾ ಪ್ರದರ್ಶನಕ್ಕೆ ಉತ್ತಮ ವೇದಿಕೆ ಒದಗಿಸುತ್ತಿವೆ’ ಎಂದು ಹೇಳಿದರು.

ADVERTISEMENT

ಹೊಸಮಠದ ಚಂದ್ರಶೇಖರ ಶಿವಯೋಗಿ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ನವಲಗುಂದ ಗವಿಮಠದ ಅಭಿನವ ಬಸವಲಿಂಗ ಸ್ವಾಮೀಜಿ, ಉತ್ತರ ಕರ್ನಾಟಕ ಹುಬ್ಬಳ್ಳಿ ದಸರಾ ಸಮಿತಿ ಅಧ್ಯಕ್ಷ ಗಂಗಾಧರ ದೊಡವಾಡ, ಬಿ.ಡಿ. ಹಿರೇಗೌಡರು, ಕಾಳುಸಿಂಗ್ ಚವ್ಹಾಣ, ಚಂದ್ರು ಚರಂತಿಮಠ, ಕಠಾರೆ ಕವಿ, ಮನೋಹರ ಸಾಲಿಮಠ, ಬಸವರಾಜ ಬಗಲಿ ಹಾಗೂ ಶಿವು ಬೆಂಡಿಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.