ADVERTISEMENT

ಗುಂಡಿನ ದಾಳಿ: ಯೋಧ ಮಂಜಪ್ಪ ಓಲೇಕಾರ್ ಹುತಾತ್ಮ

ಜಮ್ಮು–ಕಾಶ್ಮೀರ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 17:03 IST
Last Updated 1 ಅಕ್ಟೋಬರ್ 2019, 17:03 IST
   

ಹುಬ್ಬಳ್ಳಿ:ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದ ಯೋಧ ಮಂಜಪ್ಪ ಹನುಮಂತಪ್ಪ ವಾಲೀಕಾರ (29), ಜಮ್ಮು– ಕಾಶ್ಮೀರ ಗಡಿಯಲ್ಲಿ ಉಗ್ರರ ಜೊತೆಗೆ ಮಂಗಳವಾರ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ.

ಮಂಜಪ್ಪ ನಿಧನರಾಗಿರುವ ವಿಷಯವನ್ನು ಮದ್ರಾಸ್‌ ರೆಜಿಮೆಂಟ್‌ನ ಅಧಿಕಾರಿಗಳು ಕುಟುಂಬ ವರ್ಗದವರಿಗೆ ತಿಳಿಸಿದ್ದಾರೆ. 9 ವರ್ಷಗಳಿಂದ ಸೇನೆಯಲ್ಲಿದ್ದ ಅವರು ಆರು ತಿಂಗಳ ಹಿಂದೆ ಮದುವೆಯಾಗಿದ್ದರು. ಅವರ ಪತ್ನಿ ಗರ್ಭಿಣಿಯಾಗಿದ್ದಾರೆ.

‘ಸೇನಾ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ವೀರಯೋಧನ ಪಾರ್ಥಿವ ಶರೀರ ಯಾವಾಗ ಬರಲಿದೆ ಎಂಬುದು ಬುಧವಾರ ಗೊತ್ತಾಗಲಿದೆ’ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.