ADVERTISEMENT

ಉದ್ಯೋಗದ ನೆಪದಲ್ಲಿ ವಂಚನೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 13:18 IST
Last Updated 15 ಏಪ್ರಿಲ್ 2022, 13:18 IST
ಕುಂದಗೋಳದಲ್ಲಿ ಅಂಬೇಡ್ಕರ್‌ ಪುತ್ಥಳಿಗೆ ಶಾಸಕಿ ಕುಸುಮಾವತಿ ಶಿವಳ್ಳಿ ಮಾಲಾರ್ಪಣೆ ಮಾಡಿದರು
ಕುಂದಗೋಳದಲ್ಲಿ ಅಂಬೇಡ್ಕರ್‌ ಪುತ್ಥಳಿಗೆ ಶಾಸಕಿ ಕುಸುಮಾವತಿ ಶಿವಳ್ಳಿ ಮಾಲಾರ್ಪಣೆ ಮಾಡಿದರು   

ಹುಬ್ಬಳ್ಳಿ: ಉದ್ಯೋಗದ ನೆಪದಲ್ಲಿ ವಂಚಕಿಯೊಬ್ಬಳು ವಿದ್ಯಾರ್ಥಿಯೊಬ್ಬರಿಂದ ₹17,698 ಹಣ ಪಡೆದು ವಂಚಿಸಿದ್ದಾನೆ. ಬೆಂಗೇರಿಯ ಪ್ರವೀಣ ವಂಚನೆಗೊಳಗಾದವರು. ಉದ್ಯೋಗಕ್ಕಾಗಿ ವಿವಿಧ ಉದ್ಯೋಗ ತಾಣಗಳಲ್ಲಿ ನೋಂದಣಿ ಮಾಡಿಕೊಂಡಿದ್ದರು.

ಕಂಪನಿಯೊಂದರ ಮಾನವ ಸಂಪನ್ಮೂಲ ಅಧಿಕಾರಿ ಎಂದು ಕರೆ ಮಾಡಿದ ಶ್ರುತಿ ಎಂಬ ಅಪರಿಚಿತೆ, ಉದ್ಯೋಗಕ್ಕೆ ಸಂಬಂಧಿಸಿದ ಕೋರ್ಸ್ ಮುಗಿಸಲು ಹಣ ಪಾವತಿಸುವಂತೆ ಕೇಳಿದ್ದಾಳೆ. ನಿಜವೆಂದು ನಂಬಿದ ಪ್ರವೀಣ ಹಣ ಪಾವತಿಸಿದ್ದಾರೆ. ನಂತರ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ವಂಚಿಸಿದ್ದಾಳೆ. ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT