ADVERTISEMENT

ಟ್ರ್ಯಾಕ್‌ ಮೆಂಟೇನರ್‌ಗಳ ಸಂಘಟನೆ ಅಸ್ತಿತ್ವಕ್ಕೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 13:18 IST
Last Updated 16 ಡಿಸೆಂಬರ್ 2018, 13:18 IST
ನೈರುತ್ಯ ರೈಲ್ವೆ ಟ್ರ್ಯಾಕ್‌ಮನ್‌ಗಳ (ಎಆರ್‌ಟಿಯು) ಸಂಘಟನೆಯನ್ನು ಪ್ರಧಾನ ಕಾರ್ಯದರ್ಶಿ ಕಾಂತರಾಜು (ಬಲದಿಂದ ಐದನೇಯವರು) ಉದ್ಘಾಟಿಸಿದರು. ಸಂಘಟನೆ ಪದಾಧಿಕಾರಿಗಳು ಇದ್ದಾರೆ  –ಪ್ರಜಾವಾಣಿ ಚಿತ್ರ
ನೈರುತ್ಯ ರೈಲ್ವೆ ಟ್ರ್ಯಾಕ್‌ಮನ್‌ಗಳ (ಎಆರ್‌ಟಿಯು) ಸಂಘಟನೆಯನ್ನು ಪ್ರಧಾನ ಕಾರ್ಯದರ್ಶಿ ಕಾಂತರಾಜು (ಬಲದಿಂದ ಐದನೇಯವರು) ಉದ್ಘಾಟಿಸಿದರು. ಸಂಘಟನೆ ಪದಾಧಿಕಾರಿಗಳು ಇದ್ದಾರೆ  –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿರುವ ರೈಲು ಹಳಿ ನಿರ್ವಹಣೆ ಮಾಡುವ ಕಾರ್ಮಿಕರ ಸಂಘಟನೆ ಆಲ್‌ ಇಂಡಿಯಾ ರೈಲ್ವೆ ಟ್ರ್ಯಾಕ್‌ ಮೆಂಟೇನರ್ಸ್‌ ಯೂನಿಯನ್‌ (ಎಐಆರ್‌ಟಿಯು)ಗೆ ಭಾನುವಾರ ಇಲ್ಲಿನ ಭಗಿನಿ ಮಂಡಳದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕಾಂತರಾಜು ಎ.ವಿ. ಚಾಲನೆ ನೀಡಿದರು.

ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.

ನಂತರ ಮಾತನಾಡಿದ ಅವರು, ‘ಟ್ರ್ಯಾಕ್‌ಮನ್‌ಗಳ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಯುತ್ತಿದೆ. ರೈಲ್ವೆ ಇಲಾಖೆ ನಿಯಮಿತವಾಗಿ ನಮ್ಮ ವೇತನ, ರಜೆ ಹಾಗೂ ಇತರೆ ಭತ್ಯೆಗಳನ್ನು ಏರಿಕೆ ಮಾಡುತ್ತಿಲ್ಲ. ನಮಗೆ ನೀಡಲಾದ ಸೌಲಭ್ಯಗಳನ್ನೂ ಉನ್ನತ ಅಧಿಕಾರಿಗಳು ನಮಗೆ ತಲುಪಿಸುತ್ತಿಲ್ಲ’ ಎಂದು ಆರೋಪಿಸಿದರು.

ADVERTISEMENT

ವಿಭಾಗೀಯ ಅಧ್ಯಕ್ಷ ಸಂತೋಷ ಅಂಬಿಗೇರ, ಕಾರ್ಯಕಾರಿ ಅಧ್ಯಕ್ಷ ಗಣೇಶ ಬಿಲ್ಲವ, ಸಂಘಟನಾ ಕಾರ್ಯದರ್ಶಿ ಪರಶುರಾಮ ಹರನಾಳ, ಸಹ ಕಾರ್ಯದರ್ಶಿಗಳಾದ ರವಿ ಕೆಂಗನಾಳ, ರೇವಪ್ಪ ಯಳಮೇಲಿ, ಶಾಖಾ ಕಾರ್ಯದರ್ಶಿ ಎಂ.ಎಚ್‌.ನದಾಫ, ವಿಭಾಗೀಯ ಕಾರ್ಯದರ್ಶಿ ಮಂಜುನಾಥ ಗುಣಣ್ಣವರ, ಸಹಕಾರ್ಯದರ್ಶಿ ಸತೀಶ ನಾಯಕ ಇದ್ದರು.

ಶಿವಾನಂದ ಈರಪ್ಪಗೋಳ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.