ADVERTISEMENT

ಅಂಜುಮನ್‌ಗೆ ಈದ್ಗಾ ಮೈದಾನ ಹಸ್ತಾಂತರಿಸಿ: ಐ.ಎಂ. ತೊರಗಲ್ಲ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 16:48 IST
Last Updated 8 ಸೆಪ್ಟೆಂಬರ್ 2022, 16:48 IST
ಕುಂದಗೋಳ ತಾಲ್ಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಮಳೆಯನ್ನು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಂ.ಆರ್. ಪಾಟೀಲ ವೀಕ್ಷಿಸಿದರು
ಕುಂದಗೋಳ ತಾಲ್ಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಮಳೆಯನ್ನು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಂ.ಆರ್. ಪಾಟೀಲ ವೀಕ್ಷಿಸಿದರು   

ಹುಬ್ಬಳ್ಳಿ: ‘ನಗರದ ಈದ್ಗಾ ಮೈದಾನವನ್ನು ಅಂಜುಮನ್ ಎ ಇಸ್ಲಾಂ ಸಂಸ್ಥೆ ಅಥವಾ ವಕ್ಫ್‌ ಮಂಡಳಿಗೆ ಖರೀದಿಗೆ ಕೊಡಬೇಕು. ಇದರಿಂದಾಗಿ ಸಮಾಜದ ಶಾಂತಿ ಕದಡುವ ಪ್ರಯತ್ನಗಳಿಗೆ ಕಡಿವಾಣ ಬೀಳಲಿದೆ’ ಎಂದು ಜಯ ಭಾರತ ಜನ ಸೇವಾ ಸಂಘದ ಅಧ್ಯಕ್ಷ ಐ.ಎಂ. ತೊರಗಲ್ಲ ಹೇಳಿದರು.

‘ಮೈದಾನವನ್ನು ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಜಾಗವನ್ನು ಅಳತೆ ಮಾಡಿ ಸದ್ಯದ ಮಾರುಕಟ್ಟೆ ದರದಲ್ಲಿ ಅಂಜುಮನ್ ಅಥವಾ ವಕ್ಫ್ ಮಂಡಳಿ ಖರೀದಿಸಬೇಕು. ಅದಕ್ಕೆ ತಗಲುವ ವೆಚ್ಚವನ್ನುಸಂಘವು ಚಂದಾ ಸಂಗ್ರಹಿಸಿ ಭರಿಸಲಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಘದ ಜೆ.ಎಂ. ಗೋಕಾಕ, ಅಫಜಲಖಾನ ಪಠಾಣ, ಮಹಮ್ಮದ ರಫೀಕ ಜವಳಿ, ಮಲ್ಲಿಕಾರ್ಜುನ ತಗ್ಗಿಮನಿ, ಕಾಸೀಂಸಾಬ ಮುಲ್ಲಾ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.