ADVERTISEMENT

ಹುಬ್ಬಳ್ಳಿ: ನೀರು ಪೂರೈಕೆಯಲ್ಲಿ ವ್ಯತ್ಯಯ 4, 5ರಂದು

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 14:10 IST
Last Updated 2 ಜನವರಿ 2023, 14:10 IST
ನೀರು ಪೂರೈಕೆ ವ್ಯತ್ಯಯ
ನೀರು ಪೂರೈಕೆ ವ್ಯತ್ಯಯ   

ಹುಬ್ಬಳ್ಳಿ: ನೀರಸಾಗರ ನೀರು ಸರಬರಾಜು ಯೋಜನೆಯಡಿ ದುಮ್ಮವಾಡದಿಂದ ಕಣವಿ ಹೊನ್ನಾಪುರದ ನೀರು ಶುದ್ಧೀಕರಣ ಘಟಕದವರೆಗಿನ 762 ಮಿ.ಮೀ ವ್ಯಾಸದ ಏರುಕೊಳವೆ ಮಾರ್ಗದಲ್ಲಿ ವಾಲ್ವ್‌ಗಳನ್ನು ಅಳವಡಿಸುವ ಕಾಮಗಾರಿ ಜ.4 ರಂದು ಆರಂಭವಾಗಲಿದೆ.

ಹೀಗಾಗಿ ಹುಬ್ಬಳ್ಳಿ ನಗರದ ಗೋಕುಲ ರಸ್ತೆಯ ಬಡಾವಣೆಗಳು ಹಾಗೂ ಹಳೇ ಹುಬ್ಬಳ್ಳಿ ಭಾಗಗಳಿಗೆ ಜ.4 ಮತ್ತು 5 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಕೆಯುಐಡಿಎಪ್‌ಸಿ ಯೋಜನಾ ಅನುಷ್ಠಾನ ಘಟಕ ಕುಸ್ಸೆಂಪ್ ಯೋಜನೆಯ ಅಧೀಕ್ಷಕ ಎಂಜಿನಿಯರ್‌ ಎಂ.ಕೆ.ಮನಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT